Advertisement

ಕೋವಿಡ್ ಅರಿವು ಕಾರ್ಯಕ್ರಮ

05:08 PM Jun 15, 2020 | Naveen |

ದಾವಣಗೆರೆ: ದಾವಣಗೆರೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಡಾ| ಸದ್ಯೋಜಾತ ಹಿರೇಮಠದಲ್ಲಿ ಕೋವಿಡ್ -19ರ ಕುರಿತು ಸಮಾಜದ ಘಟಕಗಳ ಪದಾಧಿಕಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಆಹಾರದ ಕಿಟ್‌ ವಿತರಿಸಲು ಸಹಕರಿಸಿದ ಸಮಾಜದ ಬಾಂಧವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ಜಿಲ್ಲಾ ಪಂಚಮಸಾಲಿ ಸಮಾಜ ಹಾಗೂ ಹರ ಸೇವಾ ಸಂಸ್ಥೆಯ ಅಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಬಿ.ಲೋಕೇಶ್‌ ಪ್ರಾಸ್ತಾವಿಕ ನುಡಿಗಳಾಡಿದರು. ಶ್ರೀಧರ್‌, ಅಂದನೂರು ಕೊಟ್ರಪ್ಪ, ಬಾದಾಮಿ ಕರಿಬಸಪ್ಪ, ಎಂ.ದೊಡ್ಡಪ್ಪ, ವಾಣಿ ಶಿವಣ್ಣ, ಅಂದನೂರು ಮುರುಗೇಶ್‌, ಜಿಲ್ಲಾ ನೌಕರ ಘಟಕದ ಅಧ್ಯಕ್ಷ ಮಲ್ಲಿನಾಥ, ನಗರ ಘಟಕದ ಅಧ್ಯಕ್ಷ ಕೈದಾಳ್‌ ಶಿವಶಂಕರ್‌, ಬಾದಾಮಿ ಜಯಣ್ಣ, ಬಿಸಲೇರಿ ಜಯಣ್ಣ, ರಶ್ಮಿ ಕುಂಕೋದ್‌, ನವೀನ್‌ ಪಾಟೀಲ್‌, ಸತೀಶ್‌ ಮತ್ತೂಡ್‌ ಮತ್ತು ಇತರ ಎಲ್ಲಾ ಘಟಕಗಳ ಉಪಾಧ್ಯಕ್ಷರು, ಗೌರವಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶಿನಾಥ್‌ ನಿರೂಪಿಸಿದರು. ಯುವ ಘಟಕದ ಜಿಲ್ಲಾ ಅಧ್ಯಕ್ಷ ಕೆ. ಶಿವಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next