Advertisement

ಕೆರೂರ ಪಟ್ಟಣ ಪಂಚಾಯಿತಿ ಗದ್ದುಗೆಗೆ ಪೈಪೋಟಿ-ಹುದ್ದೆ ಮೇಲೆ ಬಿಜೆಪಿ ಕಣ್ಣು

05:49 PM Aug 07, 2024 | Team Udayavani |

ಉದಯವಾಣಿ ಸಮಾಚಾರ
ಕೆರೂರ: ಸುಮಾರು ಒಂದೂವರೆ ವರ್ಷದಿಂದ ಖಾಲಿ ಉಳಿದಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಇದರೊಂದಿಗೆ ಗದ್ದುಗೇರಲು ಪೈಪೋಟಿ ಶುರುವಾಗಿದೆ.

Advertisement

ಪಪಂಗೆ ಈ ಹಿಂದಿನ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ
ಮೀಸಲಾಗಿತ್ತು. ಕಾಂಗ್ರೆಸ್‌ನ ಮಂಜುಳಾ ತಿಮ್ಮಾಪುರ ಅಧ್ಯಕ್ಷರಾಗಿ, ಪಕ್ಷೇತರಾಗಿ ಜಯಗಳಿಸಿ ಬಿಜೆಪಿ ಬೆಂಬಲಿಸಿದ
ಸದಸ್ಯರಾದ ಕುಮಾರ ಐಹೊಳ್ಳಿ, ಸಿದ್ದಣ್ಣ ಕೊಣ್ಣೂರ, ಪ್ರಮೋದ ಪೂಜಾರ ಸೇರಿ ಮೂರು ಜನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಈ ಬಾರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಹೆಚ್ಚಿನ ಸದಸ್ಯರ ಬಲ ಹೊಂದಿದ ಬಿಜೆಪಿ ಅಧಿ ಕಾರಕ್ಕೆ ಏರುವುದು ಖಚಿತವಾಗಿದ್ದರೂ ತೆರೆಮರೆಯಲ್ಲಿ ಕಾಂಗ್ರೆಸ್‌ ಕೂಡಾಕಸರತ್ತು ನಡೆಸಿದೆ.

16 ತಿಂಗಳ ಬಳಿಕ ಮೀಸಲಾತಿ ಪ್ರಕಟ: 2018ರ ಆಗಸ್ಟ್‌ನಲ್ಲಿ ಪಪಂ ಚುನಾವಣೆ ನಡೆದಿತ್ತಾದರೂ ಆಡಳಿತ ಮಂಡಳಿ ರಚನೆಯಾಗಿದ್ದು ಅಕ್ಟೋಬರ್‌ 2020ರಲ್ಲಿ. ಬರೋಬ್ಬರಿ 14ತಿಂಗಳ ಕಾಲ ಅಧ್ಯಕ್ಷರಿ ಲ್ಲದೇ ಪಪಂ ಅಧಿಕಾರಿಗಳು
ಕಾರ್ಯನಿರ್ವಹಿಸಿದರು. 2ನೇ ಅವಧಿಯಲ್ಲೂ 16 ತಿಂಗಳು ತಡವಾಗಿ ಮೀಸಲಾತಿ ಪ್ರಕಟಗೊಂಡಿದೆ.

ಈ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗಿದೆ. 20ರಲ್ಲಿ 12ಬಿಜೆಪಿ, 8 ಕಾಂಗ್ರೆಸ್‌ ಸದಸ್ಯರು : ಪಪಂ 20 ಸದಸ್ಯರ ಸಂಖ್ಯಾ ಬಲ ಹೊಂದಿದೆ . ಇಬ್ಬರು ಪಕ್ಷೇತರು ಬೆಂಬಲದಿಂದ ಕಾಂಗ್ರೆಸ್‌ಗೆ 8 ಸದಸ್ಯರ ಬಲ ಇದೆ. ಮೂವರು ಪಕ್ಷೇತರ ಸದಸ್ಯರ ಬೆಂಬಲ ಪಕ್ಷದ 9 ಸದಸ್ಯರು ಸೇರಿ ಬಿಜೆಪಿ 12 ಸದಸ್ಯರ ಸಂಖ್ಯಾ ಬಲ ಇದ್ದು , ಅಧ್ಯಕ್ಷ ಉಪಾಧ್ಯಕ್ಷ ಎರಡು ಸ್ಥಾನಗಳ ಮೇಲೆ ಬಿಜೆಪಿ ಕಣ್ಣು ಇಟ್ಟಿದೆ.

Advertisement

ಬಿಜೆಪಿಯಲ್ಲಿ 5 ಜನರ ಪೈಪೋಟಿ: ಬಿಜೆಪಿಯಿಂದ ನಿರ್ಮಲಾ ಮದಿ, ಪರಶುರಾಮ ಮಲ್ಲಾಡದ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿವೆ. ಕುಮಾರ ಐಹೊಳ್ಳಿ, ಶೋಭಾ ಛತ್ರಬಾಣ, ಅಕ್ಕಮಾದೇವಿ ಶೆಟ್ಟರ ಕೂಡ ಆಕಾಂಕ್ಷಿಗಳಾಗಿದ್ದಾರೆ.ಅವರ ಹೊರತಾಗಿಯೂ ಇನ್ನೂ ಇಬ್ಬರು ಸದಸ್ಯರ ಹೆಸರು ಕೇಳಿ ಬಂದಿದೆ. ಬಿಜೆಪಿ ಸುಲಭವಾಗಿ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್‌ನಲ್ಲಿ ಸಂಖ್ಯಾಬಲವಿಲ್ಲದಿದ್ದರೂ ಸದಸ್ಯ ಮಲ್ಲಪ್ಪ ಹಡಪದ ಹಾಗೂ ಯಾಸಿನ್‌ ಖಾಜಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಹಿಡಿತದಲಿಲ್ಲ ಸದಸ್ಯರು: ಚುನಾವಣೆಯಲ್ಲಿ ಪಕ್ಷೇತರಾಗಿ ಜಯಗಳಿಸಿದ ಕುಮಾರ ಐಹೊಳ್ಳಿ, ಸಿದ್ದಣ್ಣ ಕೊಣ್ಣೂರ, ಪ್ರಮೋದ ಪೂಜಾರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಬಿಜೆಪಿಯಿಂದ ಜಯ ಗಳಿಸಿದ ಇಬ್ಬರು ಸದಸ್ಯರು ಕಳೆದ ಅವಧಿಯಲ್ಲಿ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದು, ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಗಣಿಸಿದೆ.

ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು ಪಕ್ಷದ ನಾಯಕರ ಆಶೀರ್ವಾದ ಮತ್ತು ಸದಸ್ಯರು ಬೆಂಬಲಿಸುವ ವಿಶ್ವಾಸ ನಮಗಿದೆ. ಪತಿ ಸದಾನಂದ ಮದಿ ಪಪಂ ಅಧ್ಯಕ್ಷರಾಗಿ ಅಧಿಕಾರ ನಡೆಸಿದ ಅನುಭವವಿದೆ.
ನಿರ್ಮಲಾ ಮದಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ಕಾಂಗ್ರೆಸ್‌ ಪಕ್ಷದಲ್ಲಿ ಅಧಿಕಾರ ಹಿಡಿಯಲು ಬೇಕಾದ ಸಂಖ್ಯಾ ಬಲ ಇಲ್ಲ. ಶಾಸಕರು ಪಕ್ಷದ ನಾಯಕರ ಹಾಗೂ ಸ್ಥಳೀಯ ಮುಖಂಡರ ನಿರ್ಧಾರಕ್ಕೆ ಎಲ್ಲ ಸದಸ್ಯರು ಬದ್ಧರಾಗಿದ್ದೇವೆ.
ಮಲ್ಲಪ್ಪ ಹಡಪದ ಕಾಂಗ್ರೆಸ್‌ ಸದಸ್ಯ

■ ಶ್ರೀಧರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next