Advertisement

ರಾಜ್‌ಕೋಟ್‌: ವಾಲಾ ನಿವಾಸದ ಮುಂದೆ ಕೈ ಪ್ರತಿಭಟನೆ, 30 ಮಂದಿ ವಶಕ್ಕೆ

03:47 PM May 18, 2018 | udayavani editorial |

ರಾಜ್‌ಕೋಟ್‌: ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಅವರ ಇಲ್ಲಿನ ನಿವಾಸದ ಮುಂದೆ ಇಂದು ಶುಕ್ರವಾರ ಬೆಳಗ್ಗೆ ಕಾಂಗ್ರೆಸ್‌ ಕಾರ್ಯಕರ್ತರ ಒಂದು ಗುಂಪು ಜಮಾಯಿಸಿ ಘೋಷಣೆ ಕೂಗಿದುದನ್ನು ಅನುಸರಿಸಿ ಪೊಲೀಸರು 30 ಮಂದಿಯನ್ನು ವಶಕ್ಕೆ ತೆಗೆದುಕೊಂಡರು.

Advertisement

ಬಹುಮತ ಇಲ್ಲದಿದ್ದರೂ ಏಕೈಕ ದೊಡ್ಡ ಪಕ್ಷವೆಂಬ ಕಾರಣಕ್ಕೆ ಕರ್ನಾಟಕದಲ್ಲಿ ಬಿಜೆಪಿಯನ್ನು ಸರಕಾರ ರಚಿಸುವಂತೆ ಆಹ್ವಾನಿಸಿದ ರಾಜ್ಯಪಾಲ ವಜೂಭಾಯಿ ವಾಲಾ ಅವರ ನಿರ್ಧಾರವನ್ನು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟಿಸಲು ಅವರ ನಿವಾಸದ ಮುಂದೆ ಜಮಾಯಿಸಿದ್ದರು. 

ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಅವರ ನಿರ್ಧಾರವು ಪ್ರಜಾಸತ್ತೆಯ ಮೇಲಿನ ಒಂದು ಕಪ್ಪು ಚುಕ್ಕೆ ಎಂದು ಕಾಂಗ್ರೆಸ್‌ ನಗರ ಘಟಕದ ಮುಖ್ಯಸ್ಥ ಮಹೇಶ್‌ ರಾಜಪೂತ್‌ ಅವರು ಹೇಳಿದರು. ವಜೂಭಾಯಿ ವಾಲಾ ಅವರ ನಿವಾಸವು ಇಲ್ಲಿನ ಕಳವಾಡ ರಸ್ತೆಗೆ ಸಮೀಪದ ನೂತನ ನಗರ ಸೊಸೈಟಿಯಲ್ಲಿ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next