Advertisement

ಸಿಎಂ ಹೇಳಿಕೆ ಹತಾಶ ಮನಸ್ಥಿತಿ: ಸಿ.ಟಿ.ರವಿ

06:20 AM Sep 21, 2018 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ ದಂಗೆ ಏಳಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿರುವುದು ಅವರ ಹತಾಶ ಮನಸ್ಥಿತಿಯ ಪರಾಕಾಷ್ಠೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಹೇಳಿದರು.

Advertisement

ಮುಖ್ಯಮಂತ್ರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಾವು ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದೇನೆಂಬುದನ್ನು ಮರೆತು ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ದಂಗೆ ಎಬ್ಬಿಸುವುದಾಗಲಿ, ಆ ಕುರಿತು ಮಾತನಾಡುವುದಾಗಲಿ ಎರಡೂ ಅಪರಾಧ ಎಂದರು.

ಅವರು ಈ ಮಾತನ್ನು ಆಡಲೇಬೇಕಾದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತನಾಡಲಿ. ಅವರು ಇಳಿದರೆ ಅಥವಾ ಕರೆ ನೀಡಿದರೆ ಅವರ ಮನೆಯಲ್ಲಿ ದಂಗೆಯಾಗಬಹುದೇ ಹೊರತು ರಾಜ್ಯದಲ್ಲಂತೂ ದಂಗೆಯಾಗುವುದಿಲ್ಲ. ಅವರೇ ಹೇಳಿದಂತೆ ಅವರು ಈ ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿಲ್ಲ. ಹಾಗಾಗಿ ಅವರು ಹುದ್ದೆಯಿಂದ ಇಳಿದರೂ ಆರೂವರೆ ಕೋಟಿ ಜನರಿಗೆ ಏನೂ ದುಃಖವಾಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next