Advertisement

ಬೇಲ್‌ ಕೊಟ್ಟರೆ ಕ್ರಿಸ್ಟಿಯನ್‌ ದೇಶದಿಂದ ಪರಾರಿ : ಕೋರ್ಟಿಗೆ CBI, ED

01:56 PM Feb 12, 2019 | udayavani editorial |

ಹೊಸದಿಲ್ಲಿ : ಅಗಸ್ಟಾ ವೆಸ್ಟ್‌ ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣದಲ್ಲಿ ಬಂಧಿಸಲ್ಪಟ್ಟಿರುವ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ ನನ್ನು ಜಾಮೀನಿನಲ್ಲಿ ಬಿಡಗಡೆ ಮಾಡಿದರೆ ಆತ ಭಾರತದಿಂದ ಪರಾರಿಯಾಗಬಹುದು ಎಂದು ಹೇಳುವ ಮೂಲಕ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ED), ಆತನ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿದವು.

Advertisement

”ಕ್ರಿಸ್ಟಿಯನ್‌ ಮಿಶೆಲ್‌ ವಿರುದ್ಧ ಗಂಭೀರ ಆರ್ಥಿಕ ಅಪರಾಧದ ಆರೋಪವಿದೆ; ಆತನ ಅಪರಾಧವನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ” ಎಂದು ಸಿಬಿಐ ಮತ್ತು ED ತಮ್ಮ ಪ್ರತ್ಯೇಕ ಉತ್ತರದಲ್ಲಿ ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್‌ ಅವರಿಗೆ ಮನದಟ್ಟು ಮಾಡಿದವು. 

ಮಿಶೆಲ್‌ ವಕೀಲ ತನಗೆ ಈ ವಿಷಯದಲ್ಲಿ ವಾದಿಸಲು ಸಮಯಾವಕಾಶ ಕೋರಿದ ಕಾರಣ ನ್ಯಾಯಾಲಯ ಪ್ರಕರಣವನ್ನು ನಾಳೆ ಬುಧವಾರಕ್ಕೆ ಮುಂದೂಡಿತು. 

Advertisement

Udayavani is now on Telegram. Click here to join our channel and stay updated with the latest news.

Next