Advertisement

ಚಿನ್ನಿ ನಿರಾಣಿ ಎಂದು ಕರೆಯುತ್ತಿದ್ದರು

04:58 PM Aug 17, 2018 | Team Udayavani |

ಮುಧೋಳ: ನನ್ನನ್ನು ‘ಚಿನ್ನಿ ನಿರಾಣಿ'(ಚಿನ್ನಿ ಹಿಂದಿಯಲ್ಲಿ ಸಕ್ಕರೆ) ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಪ್ರೀತಿಯಿಂದ ಕರೆಯುತ್ತಿದ್ದರು. ಅವರು ಎಲ್ಲರನ್ನು ಅವರವರ ಹೆಸರಿನಿಂದ ಕರೆಯುತ್ತಿದ್ದರು. ಅದು ವಾಜಪೇಯಿ ಅವರ ಅಪರೂಪದ ನಾಯಕತ್ವದ ಗುಣ. ನಾನು ಶಾಸಕನಾಗಿ, ಸಚಿವನಾಗಿ ವಾಜಪೇಯಿ ಅವರನ್ನು ಹಲವು ಬಾರಿ ಭೇಟಿಯಾಗಿ ಅವರೊಂದಿಗೆ ಚರ್ಚಿಸುವ ಅವಕಾಶ ದೊರೆತಿದ್ದು, ನನ್ನ ಬದುಕಿನ ಭಾಗ್ಯವೆಂದು ಭಾವಿಸಿದ್ದೇನೆ ಎಂದು ಶಾಸಕ ಮುರುಗೇಶ ನಿರಾಣಿ ವಾಜಪೇಯಿ ಅವರ ವ್ಯಕ್ತಿತ್ವ ಸ್ಮರಿಸಿ ಕಂಬನಿ ಮಿಡಿದಿದ್ದಾರೆ.

Advertisement

ಭಾರತದಲ್ಲಿ ಹರಿದ ದೊಡ್ಡ ನದಿಗಳ ಜೋಡನೆ, ವೈಜ್ಞಾನಿಕ ಕೃಷಿ, ತಂತ್ರಜ್ಞಾನದ ಅಭಿವೃದ್ಧಿ ಮುಂತಾದ ಮಹತ್ವದ ಚಿಂತನೆಗಳನ್ನು ಅವರು ದೇಶಕ್ಕೆ ಕೊಟ್ಟಿದ್ದಾರೆ. ಪ್ರಧಾನಿಯಾಗಿ ಅವರು ಜಗತ್ತಿನ ಉಳಿದ ರಾಷ್ಟ್ರಗಳೊಂದಿಗೆ ಅವರು ಒಳ್ಳೆಯ ಸಂಬಂಧ ಬೆಳೆಸಿದರು. ಮಾಜಿ ಪ್ರಧಾನಿ ಅಟಲ್‌ ಬಿಹಾರ ವಾಜಪೇಯಿ ಭಾರತದ ಹೆಮ್ಮೆಯ ಪುತ್ರ. ನಮ್ಮ ದೇಶವನ್ನು ಸಶಕ್ತವಾಗಿ ಕಟ್ಟುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಗಾಂಧಿಧೀಜಿ ಹಾಗೂ ನೆಹರು ಅವರಂತೆ ವಾಜಪೇಯಿ ಅವರ ಹೆಸರು ಭಾರತದ ಚರಿತ್ರೆಯಲ್ಲಿ ಅಮರವಾಗಿ ಉಳಿಯುತ್ತದೆ ಎಂದು ನಿರಾಣಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next