Advertisement

ಕಾವೇರಿ ಮಂಡಳಿಗೆ ಆಗ್ರಹಿಸಿ ಮತ್ತಷ್ಟು ಉಗ್ರ ಹೋರಾಟ

05:25 AM Apr 17, 2018 | Team Udayavani |

ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ (ಸಿಎಂಡಿ)ರಚನೆಗೆ ಒತ್ತಾಯಿಸಿ ಕಳೆದ ವಾರ ಚೆನ್ನೈನಲ್ಲಿ ನಡೆಯಬೇಕಿದ್ದ ಐಪಿಎಲ್‌ ಪಂದ್ಯಗಳು ಸ್ಥಳಾಂತರಗೊಳ್ಳುವಂತೆ ಮಾಡಿದ್ದ ತಮಿಳು ಹೋರಾಟಗಾರರು, ಮುಂಬರುವ ದಿನಗಳಲ್ಲಿ ಮರೀನಾ ಬೀಚ್‌ನಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಹೇಳಿವೆ.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳಗ ವಳ್ವರಿಮೈ ಕಚ್ಚಿ (ಟಿವಿಕೆ) ಮುಖ್ಯಸ್ಥ ಟಿ. ವೇಲ್‌ ಮುರುಗನ್‌, ಸಿಎಂಜಿ ರಚನೆ ಬಗ್ಗೆ ಕೇಂದ್ರ ಸರ್ಕಾರ ತುರ್ತು ನಿರ್ಧಾರ ಕೈಗೊಳ್ಳದಿದ್ದರೆ ತಮಿಳುನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೇದಾಂತ ರಿಸೋರ್ಸಸ್‌ ಹಾಗೂ ದಕ್ಷಿಣ ರೈಲ್ವೆಗೆ ನೀಡಲಾಗಿರುವ ನೀರಿನ ಸಂಪರ್ಕವನ್ನು ಕಡಿತಗೊ ಳಿಸುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ, ಜಲ್ಲಿಕಟ್ಟು ಕ್ರೀಡೆಗೆ ಆಗ್ರಹಿಸಿ ಮರೀನಾ ಬೀಚ್‌ನಲ್ಲೇ ನಡೆದಿದ್ದ ಬೃಹತ್‌ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಅಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಆದರೂ, ಅಲ್ಲೇ ಪ್ರತಿಭಟನೆ ಮಾಡುವುದಾಗಿ ವೇಲ್‌ ಮುರುಗನ್‌ ತಿಳಿಸಿದ್ದಾರೆ. ತೂತುಕುಡಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೇದಾಂತ ಕಾರ್ಖಾನೆ ಯಿಂದಾಗಿ ಸುತ್ತಲಿನ ಜನರಿಗೆ ಅನೇಕ ಆರೋಗ್ಯ ತೊಂದರೆಗಳು ಕಾಣಿಸಿಕೊಂಡಿವೆ ಎಂದ ಅವರು, ಇದೇ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಮರೀನಾ ಬೀಚ್‌ನಲ್ಲಿ ಬೃಹತ್‌ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next