Advertisement

ಜ. 26-30: ಅತ್ತೂರು ಜಾತ್ರೆ

01:31 AM Jan 09, 2020 | mahesh |

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವವು ಜ. 26ರಿಂದ ಜ. 30ರ ವರೆಗೆ ಜರಗಲಿದೆ. “ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಉತ್ಸವದಲ್ಲಿ ಒಟ್ಟು 48 ಬಲಿ ಪೂಜೆಗಳು ನಡೆಯಲಿವೆ.

Advertisement

ಜ. 26ರ ಸಂಜೆ 6.30ಕ್ಕೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ (ಕೊಂಕಣಿಯಲ್ಲಿ), ಜ. 27ರ ಸಂಜೆ 6 ಗಂಟೆಗೆ ಚಿಕ್ಕಮಗಳೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಟಿ. ಅಂತೋಣಿ ಸ್ವಾಮಿ (ಕನ್ನಡ), ಜ. 28ರ ಪೂ. 11.30ಕ್ಕೆ ಪುತ್ತೂರು ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್‌ ಮಾರ್‌ ಮಕಾರಿಯೋಸ್‌ ಕಲಯಿಲ್‌ (ಕನ್ನಡ), ಸಂಜೆ 6ಕ್ಕೆ ಶಿವಮೊಗ್ಗ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್‌ ಸೆರಾವೊ ಎಸ್‌.ಜೆ. (ಕನ್ನಡ), ಜ. 29ರ ಪೂ. 10.30ಕ್ಕೆ ಉಡುಪಿ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್‌ ಲೋಬೋ (ಕೊಂಕಣಿ), ಸಂಜೆ 5.30ಕ್ಕೆ ಬೆಳ್ತಂಗಡಿ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್‌ ಮುಕ್ಕುಝಿ (ಕನ್ನಡ) ಮತ್ತು ಜ. 30ರಂದು ಪೂ. 10.30ಕ್ಕೆ ಮಂಗಳೂರು ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ (ಕೊಂಕಣಿ) ಅವರು ಬಲಿಪೂಜೆ ನೆರವೇರಿಸಲಿರುವರು ಎಂದು ಧರ್ಮ ಕೇಂದ್ರದ ನಿರ್ದೇಶಕ ಹಾಗೂ ಪ್ರಧಾನ ಗುರು ವಂ| ಜಾರ್ಜ್‌ ಡಿ’ಸೋಜಾ ಹಾಗೂ ಕೇಂದ್ರದ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾನ್‌ ಡಿ’ಸಿಲ್ವ ಅವರು ತಿಳಿಸಿದ್ದಾರೆ.

ಜ. 26ರಂದು ಮಕ್ಕಳಿಗಾಗಿ ಮತ್ತು ಜ. 27ರಂದು ಕೊಂಕಣಿಯಲ್ಲಿ ವ್ಯಾಧಿಷ್ಠರಿಗಾಗಿ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next