Advertisement

ಅಸಮಾಧಾನ ಶಮನ : ಕೊನೆಗೂ ಆನಂದ್ ಸಿಂಗ್ ಕೊಠಡಿಗೆ ನಾಮಫಲಕ ಅಳವಡಿಕೆ

05:25 PM Aug 17, 2021 | Team Udayavani |

ಬೆಂಗಳೂರು : ಖಾತೆಗಳ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಇದೀಗ ಬಿಕ್ಕಟ್ಟು ಶಮನಗೊಂಡ ಹಿನ್ನೆಲೆಯಲ್ಲಿ ಕಚೇರಿಗೆ ನಾಮಫಲಕವನ್ನು ಅಳವಡಿಸಲಾಗಿದೆ.

Advertisement

ಈ ಹಿಂದೆ ಸೂಕ್ತ ಖಾತೆ ನೀಡಿಲ್ಲವೆಂದು ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಯ ಸಚಿವರಾದ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದರು ಅಲ್ಲದೆ ಈ ವಿಚಾರವಾಗಿ ರಾಜಿನಾಮೆಯನ್ನು ನೀಡುವುದಾಗಿ ಸುಳಿವನ್ನು ನೀಡಿದ್ದರು, ಈ ವಿಚಾರವಾಗಿ ಸಚಿವ ಆನಂದ್ ಸಿಂಗ್ ಅವರ ಕೊಠಡಿಗೆ ನಾಮಫಲಕವನ್ನು ಹಾಕಿರಲಿಲ್ಲ, ಆದರೆ ಹೈಕಮಾಂಡ್ ಮಾತುಕತೆ ಬಳಿಕ ತನಗೆ ಕೊಟ್ಟಿರುವ ಖಾತೆಯಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಅಲ್ಲದೆ ನಾಳೆ (ಬುಧವಾರ ) ಕಚೇರಿಗೆ ಭೇಟಿ ನೀಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ.  ಆದ ಕಾರಣ ವಿಕಾಸಸೌಧದಲ್ಲಿ ಇರುವ ಕಚೇರಿಗೆ ನಾಮಫಲಕವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ :ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ; ಪಾಕ್ ನಲ್ಲಿ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆ ಧ್ವಂಸ

Advertisement

Udayavani is now on Telegram. Click here to join our channel and stay updated with the latest news.

Next