Advertisement

ಅಮಿತ್‌ ಶಾ ರಥಯಾತ್ರೆಗೆ ಅನುಮತಿ ನಿರಾಕರಣೆ

06:00 AM Dec 07, 2018 | Team Udayavani |

ಕೋಲ್ಕತ್ತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ನಿಂದ ಶುಕ್ರ ವಾರ ಆರಂಭ ವಾಗಬೇಕಿದ್ದ ರಥಯಾತ್ರೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಹೈಕೋರ್ಟ್‌ ಅನುಮತಿ ನಿರಾಕರಿಸಿವೆ. ಹೀಗಾಗಿ, ರಥಯಾತ್ರೆ ಸ್ಥಗಿತಗೊಳಿಸಲಾಗಿದೆ.

Advertisement

ರಥಯಾತ್ರೆಯಿಂದ ಕೋಮು ಗಲಭೆ ಆಗುವ ಸಾಧ್ಯತೆಗಳಿವೆ ಎಂದು ಪಶ್ಚಿಮ ಬಂಗಾಳ ಸರ್ಕಾರ  ಕಲ್ಕತ್ತಾ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಮನವಿ ಪರಿಶೀಲಿಸಿದ ಹೈಕೋರ್ಟ್‌, ಅಹಿತಕರ ಘಟನೆ ನಡೆದರೆ  ಯಾರು ಹೊಣೆ ಹೊರುತ್ತೀರಿ ಎಂದು ಪ್ರಶ್ನಿಸಿದಾಗ,  ಬಿಜೆಪಿ ಪರ ವಕೀಲರು, ಸರ್ಕಾರವೇ ಹೊಣೆ ಹೊರಬೇಕು ಎಂದರು. ಕೊನೆಗೆ ನ್ಯಾಯಾಲಯ, ಯಾತ್ರೆ ಹಾದುಹೋಗುವ 24 ಜಿಲ್ಲೆಗಳ ಎಸ್‌ಪಿಗಳು ಸಭೆ ನಡೆಸಿ 21ರಂದು ವರದಿ ನೀಡಲಿ. ಆ ಬಗ್ಗೆ  ಜ.9ರಂದು ವಿಚಾರಣೆ ನಡೆಸ ಲಾಗು ವುದು. ಅಲ್ಲಿಯವರೆಗೂ ಯಾತ್ರೆಗೆ ಅವಕಾಶವಿಲ್ಲ ಎಂದಿತು. ಇದನ್ನು ಪ್ರಶ್ನಿಸಿ, ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಬಿಜೆಪಿ ಹೇಳಿದೆ. ಏತನ್ಮಧ್ಯೆ, ಕೂಚ್‌ಬೆಹರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್‌ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next