Advertisement

ಅಂಬೇಡ್ಕರ್‌ ಭವನ ಕಾಮಗಾರಿ ಶೀಘ್ರ ಆರಂಭಿಸಲು ಮನವಿ

03:17 PM Dec 16, 2017 | Team Udayavani |

ಹುಣಸಗಿ: ಮಾಳನೂರ ಗ್ರಾಮದ ದಲಿತ ಮುಖಂಡರು ವಿವಿಧ ಬೇಡಿಕೆಗಳು ಈಡೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದರು. ಹುಣಸಗಿಗೆ ಸಿಎಂ ಆಗಮನಕ್ಕೆ ವೇದಿಕೆ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದು, ಕಳೆದ 2016ರಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ದೊರೆತಿದೆ. ಆದರೆ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ. ಆದ್ದರಿಂದ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. 

Advertisement

ಮಾಳನೂರ ಗ್ರಾಮದಲ್ಲಿ ಬೌದ್ಧ ಧರ್ಮ ಕಾರ್ಯಕ್ರಮ ಆಯೋಜನೆ ಮಾಡಲು ಮತ್ತು ಪ್ರಾರ್ಥನೆಗೆ ಮಂದಿರವಿಲ್ಲ. ಆದ್ದರಿಂದ ಬೌದ್ಧ ಮಂದಿರ ಮಂಜೂರು ಮಾಡಬೇಕು ಹಾಗೂ ಹುಣಸಗಿ ನೂತನ ತಾಲೂಕಿಗೆ ಅಂಬೇಡ್ಕರ್‌ ಭವನದ ನಿರ್ಮಾಣಕ್ಕೆ ಒತ್ತು ನೀಡಬೇಕು. ಮಾಳನೂರ ಗ್ರಾಮದಲ್ಲಿನ ಅಂಬೇಡ್ಕರ್‌ ಭವನದ ನಿರ್ಮಾಣ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಗ್ರಾಮದ ಸಂಗಮೇಶ.ಎಚ್‌, ಗುರುರಾಜ ದೊಡ್ಡಮನಿ, ಭೀಮಣ್ಣ ನಾಟೇಕಾರ, ಚಂದ್ರಶೇಖರ ಹಳ್ಳೂರ, ಯಲ್ಲಪ್ಪ ಗುಂಡಲಗೇರಾ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next