Advertisement

BBK11: ಜಗದೀಶ್‌ ಬಿಟ್ಟು ಈ ವ್ಯಕ್ತಿ ಬಿಗ್‌ಬಾಸ್‌ ಮನೆಯಲ್ಲಿ ಇರೋದು ತುಂಬಾ ಡೇಂಜರ್..‌ ಯಮುನಾ

04:22 PM Oct 07, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada-11) ದ ದೊಡ್ಮನೆ ಆಟದಿಂದ ಮೊದಲ ವಾರವೇ ಯಮುನಾ ಶ್ರಿನಿಧಿ ಅವರು ಮನೆಯಿಂದ ಆಚೆ ಬಂದಿದ್ದಾರೆ.

Advertisement

ಬಿಗ್‌ ಬಾಸ್‌ ಮನೆಗೆ ಸ್ವರ್ಗದ ನಿವಾಸಿಯಾಗಿ ಎರಡನೇ ಸ್ಪರ್ಧಿಯಾಗಿ ಯಮುನಾ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಅವರು ಚೈತ್ರಾ ಅವರೊಂದಿಗಿನ ವಾದದಿಂದ ಸದ್ದು ಮಾಡಿದ್ದರು. ಆದರೆ ಆದಾದ ಬಳಿಕ ಅವರು ಅಷ್ಟಾಗಿ ಕಾಣಿಸಿಕೊಳ್ಳಿಲ್ಲ.

ಮನೆಯಲ್ಲಿ ಹಿರಿಯರಾಗಿದ್ದ ಅವರು, ಜಗದೀಶ್‌ ಹಾಗೂ ಮಂಜು ಅವರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಅತ್ತ ಕೆಲ ಸ್ಪರ್ಧಿಗಳೊಂದಿಗೆ ಆತ್ಮೀಯವಾಗಿದ್ದರು. ಆದರೆ ಆಟದ ವಿಚಾರದಲ್ಲಿ ಯಮುನಾ ಹಿಂದೆ ಉಳಿದಿದ್ದರು. ಆಡಿದ ಟಾಸ್ಕ್‌ ನಲ್ಲಿ ಅವರು ಅಷ್ಟೇನು ಕಮಾಲ್‌ ಮಾಡಿಲ್ಲ.

ಪರಿಣಾಮ ಯಮುನಾ ಶ್ರೀನಿಧಿ (Actress Yamuna Srinidhi) ಮೊದಲ ವಾರವೇ ಮನೆಯಿಂದ ಆಚೆ ಬಂದಿದ್ದಾರೆ. ಮನೆಯಿಂದ ಹೊರಬಂದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಬಿಗ್‌ ಬಾಸ್‌ ಮನೆಯಲ್ಲಿನ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ.

Advertisement

ಬಿಗ್‌ ಬಾಸ್‌ ಮನೆಯಲ್ಲಿ ಅತ್ಯಂತ ಅಪಾಯಕಾರಿಯ ವ್ಯಕ್ತಿತ್ವದ ಯಾರದ್ದು ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, “ ಲಾಯರ್​ ಜಗದೀಶ್​ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್​. ಸಿಕ್ಕಪಟ್ಟೆ ಮ್ಯಾನಿಪುಲೇಟ್​, ಎಲ್ಲರನ್ನು ವಶಕ್ಕೆ ತೆಗೆದುಕೊಳ್ಳುವವರು. ಏನು ಹೇಳದೆ ಏನು ಗೊತ್ತಾಗದೆ ಟ್ರಿಕ್​ ಮಾಡುತ್ತಾರೆ ಹಾಗಾಗಿ ಅವರು ಡೇಂಜರಸ್” ಎಂದಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ತನ್ನ ಆಟವನ್ನು ಶುರು ಮಾಡಿರುವವರು ಯಾರು ಮತ್ತು ಆಟನ್ನೇ ಶುರು ಮಾಡದವರು ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, “ಮೊದಲ ಸೆಕೆಂಡ್‌ನಿಂದ ಸಂಶಯವೇ ಬೇಡ ತನ್ನ ಆಟವನ್ನು ಶುರು ಮಾಡಿದವರು ಜಗದೀಶ್‌ ಅವರು. ಹೇಳ್ಕೊಂಡು ಹೇಳ್ಕೊಂಡು ಬಿಂದಾಸ್‌ ಆಗಿ ತನ್ನ ಆಟವನ್ನು ಆಡುತ್ತಿದ್ದಾರೆ. ಇನ್ನು ಧರ್ಮ ಕೀರ್ತಿರಾಜ್‌ ಹಾಗೂ ಧನರಾಜ್‌ ಅವರು ತನ್ನ ಆಟವನ್ನು ಇನ್ನು ಶುರುಮಾಡಿಲ್ಲ” ಎಂದು ಅವರು ಹೇಳಿದ್ದಾರೆ.

ಧರ್ಮ ಯಾವ ಪರದೆ, ಮುಖವಾಡ ಇಲ್ಲದೆ ಇದ್ದಾರೆ. ಧನರಾಜ್‌ ಅವರು ಇನ್ನು ಕೂಡ ಬಿಗ್‌ ಬಾಸ್‌ ಮನೆಗೆ ಒಗ್ಗಿಕೊಂಡಿಲ್ಲ. ಅವರು ನಾನು ನನ್ನಗಿಲ್ಲ ಎನ್ನುವಂತಿದ್ದಾರೆ. ಅವರಿಗೆ ಭಯ ಜಾಸ್ತಿ ಎಂದು ಯಮುನಾ ಹೇಳಿದ್ದಾರೆ.

ವೇದಿಕೆಯಲ್ಲಿ ಯಮುನಾ ಹೇಳಿದ್ದೇನು?

ಬಿಗ್ ಬಾಸ್ ಮನೆಯಿಂದ ಆಚೆ ಬಂದು ಮಾತನಾಡಿದ ಯಮುನಾ ಅವರು, ನಾನು ಮನೆಯಲ್ಲಿ ಸ್ವಲ್ಪ ದಿನ ಇರುತ್ತೇನೆ ಅನ್ಕೊಂಡಿದ್ದೆ. ಶಿಶಿರ್, ತಿವಿಕ್ರಮ್, ಧರ್ಮ ಕೀರ್ತಿರಾಜ್ ಫಿನಾಲೆವರೆಗೂ ಇರಬಹುದು. ಮುಂದಿನ ವಾರ ಮೋಕ್ಷಿತಾ ಅಥವಾ ಐಶ್ವರ್ಯಾ ಅವರು ಎಲಿಮಿನೇಟ್ ಆಗಬಹುದು ಎಂದು ಹೇಳಿದ್ದಾರೆ.

ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ಅವರು, ‘ಸಪ್ತ ಸಾಗರದ ಆಚೆ ಎಲ್ಲೋ’, ‘ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ಯಮುನಾ ಶ್ರೀನಿಧಿ ಅವರು ಸದ್ಯಕ್ಕೆ ‘ನನ್ನ ದೇವ್ರು’ ಧಾರಾವಾಹಿಯಲ್ಲಿ ಪಾತ್ರವೊಂದನ್ನು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next