Advertisement

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ

07:01 PM Feb 20, 2021 | Team Udayavani |

ಮುಂಡ್ಕೂರು : ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಚಿತ್ರನಟ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಭೇಟಿ ನೀಡಿ ದೇವರ ದರ್ಶನ ಪಡೆದರು.

Advertisement

ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂಪ್ರೋಕ್ಷಣೆಯ ದಿನವಾದ ಶನಿವಾರ ವಿಜಯ ರಾಘವೇಂದ್ರ ಅವರು ಪತ್ನಿ ಮತ್ತು ಪುತ್ರನ ಜೊತೆ ಮುಂಡ್ಕೂರು ದೇವಳಕ್ಕೆ ಆಗಮಿಸಿದರು.

ದುರ್ಗಾಪರಮೇಶ್ವರೀ ಹಾಗೂ ಪರಿವಾರ ಸಾನಿಧ್ಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಟ ವಿಜಯ ರಾಘವೇಂದ್ರ ಮುಂಡ್ಕೂರು ಕ್ಷೇತ್ರದ ಭೇಟಿ ಮಾಡಲು ಬಹಳ ದಿನಗಳಿಂದ ಕಾಯುತ್ತಿದ್ದೆ, ಇಂದು ಜಾತ್ರಾ ಮಹೋತ್ಸವದ ಸಂಪ್ರೋಕ್ಷಣೆಯಂದೇ ದೇವರ ದರ್ಶನಕ್ಕೆ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.

ಮುಂಡ್ಕೂರು ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯ ಮತ್ತು ಅವರ ಸಹೋದರರು ವಿಜಯ ರಾಘವೇಂದ್ರ ಮತ್ತು ಅವರ ಕುಟುಂಬಕ್ಕೆ ಶ್ರೀ ದೇವರ ಗಂಧ ಪ್ರಸಾದ, ಮಂತ್ರಾಕ್ಷತೆಗಳನಿತ್ತು ಹರಸಿದರು.

ಇದನ್ನೂ ಓದಿ:ಸಿಇಟಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ

Advertisement

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವೀಂದ್ರ ಹೆಚ್. ಶೆಟ್ಟಿ ಮುಲ್ಲಡ್ಕ ಪರಾರಿ, ಸದಸ್ಯರಾದ ಪ್ರಸಾದ್ ಎಂ. ಶೆಟ್ಟಿ ಅಂಗಡಿಗುತ್ತು, ರಘುವೀರ ಶೆಣೈ ಚೈನಪೇಟೆ, ಹರ್ಷಿಣಿ ಕುಲಾಲ್ ಅರದಲ್, ನಟ ವಿಜಯರಾಘವೇಂದ್ರ ಕುಟುಂಬದ ಆಪ್ತರಾದ ರವಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next