Advertisement

ಭ್ರಷ್ಟರಿಗೆ ACB ಶಾಕ್‌:ನಾಲ್ವರು ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ 

09:11 AM May 10, 2017 | |

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ  4 ಅಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಶಾಕ್‌ ನೀಡಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ. 

Advertisement

ರಾಮನಗರ ತಹಶೀಲ್ದಾರ್‌ ರಘುಮೂರ್ತಿ ನಿವಾಸ ಹಾಗೂ ಕಚೇರಿ, ಕೆಪಿಟಿಸಿಎಲ್‌ ನಿರ್ದೇಶಕ ಎಚ್‌.ನಾಗೇಶ್‌ ಮನೆ, ಕಚೇರಿ ಮತ್ತು ಸಂಬಂಧಿಕರ ನಿವಾಸ ದ ಮೇಲೆ , ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀಕ್ಷಕ  ರಾಮಕೃಷ್ಣ ರೆಡ್ಡಿ  ನಿವಾಸದ ಮೇಲೆ ,ಬಿಬಿಎಂಪಿ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ  ಡಾ.ಕೆ.ಸಿ ಯತೀಶ್‌ ಅವರ ನಾಗರಬಾವಿ 2 ನೇ ಹಂತದಲ್ಲಿರುವ ನಿವಾಸ ದ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. 

ಎಸಿಬಿ ಎಸ್‌ಪಿ ಗಿರೀಶ್‌ ಅವರ ನೇತೃತ್ವದಲ್ಲಿ 11 ತಂಡಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next