Advertisement

“ಖನನ’ನಾಯಕನ ಹೊಸ ಚಿತ್ರ

10:02 AM Jul 04, 2019 | Team Udayavani |

“ಖನನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ ನಾಯಕ ಆರ್ಯವರ್ಧನ್‌, ಈಗ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, ಹೀರೋ ಆಗಿ ಅಭಿನಯಿಸಿದ ಮೊದಲ ಚಿತ್ರ “ಖನನ’ ಅರ್ಧ ಶತಕ ಬಾರಿಸಿದೆ. ಸಹಜವಾಗಿಯೇ ಅದು ಅವರ ಸಂತಸಕ್ಕೆ ಕಾರಣವಾಗಿದೆ. ಅವರ ತಂದೆ ಶ್ರೀನಿವಾಸ್‌ ರಾವ್‌ ಅವರು ಆರ್ಯವರ್ಧನ್‌ಗೆ ನಿರ್ಮಿಸಿದ ಚಿತ್ರ “ಖನನ’.

Advertisement

ಮೊದಲ ಚಿತ್ರದಲ್ಲೇ ಮಂದಹಾಸ ಬೀರಿರುವ ಆರ್ಯವರ್ಧನ್‌, ಈಗ ಮತ್ತೂಂದು ಹೊಸ ಚಿತ್ರಕ್ಕೆ ಹೀರೋ ಆಗುತ್ತಿದ್ದಾರೆ. ಹೌದು, “ಖನನ’ ಬಳಿಕ ಆರ್ಯವರ್ಧನ್‌ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೂ ಅವರ ತಂದೆ ಶ್ರೀನಿವಾಸ್‌ ರಾವ್‌ ಅವರೇ ನಿರ್ಮಾಪಕರು ಎಂಬುದು ವಿಶೇಷ. ಇನ್ನು, ಈ ಚಿತ್ರವನ್ನು ರಾಹುಲ್‌ ಈರಯ್ಯ ನಿರ್ದೇಶಿಸುತ್ತಿದ್ದಾರೆ.

ಇವರಿಗೆ ಇದು ಮೊದಲ ಚಿತ್ರ. ಕಳೆದ ಹತ್ತು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ಇವರು, ನಿರ್ದೇಶಕ ನಾಗಣ್ಣ ಅವರ ಬಳಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಕಳೆದ ಒಂದೂವರೆ ವರ್ಷದಿಂದಲೂ ಸ್ಕ್ರಿಪ್ಟ್ ಕೆಲಸದಲ್ಲಿದ್ದ ರಾಹುಲ್‌ ಈರಯ್ಯ, “ಖನನ’ ಚಿತ್ರ ನೋಡಿದ ಬಳಿಕ ನಾಯಕ ತಮ್ಮ ಕಥೆಗೆ ಸರಿಹೊಂದುತ್ತಾರೆ ಎಂದು ಆಯ್ಕೆ ಮಾಡಿದ್ದಾರಂತೆ.

ಈ ಚಿತ್ರದಲ್ಲಿ ಆರ್ಯವರ್ಧನ್‌ ಜೊತೆಗೆ ಮತ್ತೂಬ್ಬ ನಾಯಕನೂ ಇದ್ದಾನೆ. ಈ ಹಿಂದೆ “ರವಿಹಿಸ್ಟರಿ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಕಾರ್ತಿಕ್‌ ಈ ಚಿತ್ರದ ಮತ್ತೂಬ್ಬ ಹೀರೋ. ಅಂದಹಾಗೆ, “ಇದೊಂದು ಮರ್ಡರ್‌ ಮಿಸ್ಟರಿ ಹೊಂದಿರುವ ಚಿತ್ರ.

ಥ್ರಿಲ್ಲರ್‌ ಅಂಶಗಳು ಸಾಕಷ್ಟು ಇವೆ. ಸದ್ಯಕ್ಕೆ ಇಬ್ಬರು ಹೀರೋಗಳು ಪಕ್ಕಾ ಆಗಿದ್ದು, ಉಳಿದಂತೆ ನಾಯಕಿ ಇನ್ನಿತರೆ ಪಾತ್ರಗಳು ಆಯ್ಕೆಯಾಗಬೇಕಿದೆ’ ಎನ್ನುತ್ತಾರೆ ನಿರ್ದೇಶಕ ರಾಹುಲ್‌ ಈರಯ್ಯ. ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಲಾಯಿತು. ಚಿತ್ರಕ್ಕೆ ಸುನೀಲ್‌ ಛಾಯಾಗ್ರಹಣ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next