Advertisement

ಬಂಟ್ವಾಳ: ನಾಯಿ ಹಿಡಿಯಲು ಬಂದು ಬಾವಿಗೆ ಬಿದ್ದ ಚಿರತೆ

08:54 AM Oct 01, 2019 | keerthan |

ಬಂಟ್ವಾಳ: ಸಾಕು ನಾಯಿಯನ್ನು ಹಿಡಿಯಲು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ರಾಯಿ ಸಮೀಪ ಸೋಮವಾರ ಮುಂಜಾನೆ ನಡೆದಿದೆ.

Advertisement

ಇಲ್ಲಿನ ಬಲ್ಲಾಳ್ ಬೆಟ್ಟು ನಿವಾಸಿ ಮೋನಪ್ಪ ಬಂಗೇರ ಅವರ ಮನೆಯಂಗಳದಲ್ಲಿದ್ದ ಎರಡು ಸಾಕು ನಾಯಿಗಳನ್ನು ಹಿಡಿಯಲು ಸೋಮವಾರ ಮುಂಜಾನೆ ಚಿರತೆ ಬಂದಿತ್ತು. ಆದರೆ ತಪ್ಪಿ ಬಾವಿಗೆ ಬಿದ್ದಿದೆ.

ಸ್ಥಳಿಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಕಾರ್ಯಾಚರಣೆ ನೋಡಲು ಜನರು ಅಪಾರ ಸಂಖ್ಯೆಯಲ್ಲಿ ಕುತೂಹಲದಿಂದ ಸೇರಿದ್ದಾರೆ.

ಇಲ್ಲಿನ ದೈಲ, ಅಮ್ಯಾಲು, ಕೈತ್ರೋಡಿ, ಬದನಡಿ ಮತ್ತಿತರ ಪ್ರದೇಶಗಳಲ್ಲಿ ಕಳೆದ ಹಲವು ವರ್ಷಗಳಲ್ಲಿ ಹಲವಾರು ನಾಯಿ ಮತ್ತು ಜಾನುವಾರುಗಳನ್ನು ಚಿರತೆ ಕೊಂಡೊಯ್ದಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next