Advertisement

Finance: 5 ದಿನಗಳಲ್ಲಿ ಹೂಡಿಕೆದಾರರಿಗೆ ಮೂರು ಲಕ್ಷ ಕೋಟಿ ನಷ್ಟ

11:44 PM Oct 25, 2023 | Team Udayavani |

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಸತತ ಐದು ದಿನಗಳಿಂದ ಸಂವೇದಿ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಈ ಅವಧಿಯಲ್ಲಿ ಹೂಡಿಕೆದಾರರು ಬರೋಬ್ಬರಿ 3 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಅ.7ರಿಂದ ಇಸ್ರೇಲ್‌ ಮತ್ತು ಹಮಾಸ್‌ ಉಗ್ರ ಸಂಘಟನೆಯ ನಡುವೆ ಯುದ್ಧ ಶುರುವಾದ ಬಳಿಕ ಬಾಂಬೆ ಷೇರು ಪೇಟೆಯಲ್ಲಿ ಶೇ.2.70 ಸೂಚ್ಯಂಕ ಇಳಿಕೆಯಾಗಿದೆ.

Advertisement

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಯಿಂದಾಗಿ ಷೇರುಪೇಟೆಯಲ್ಲಿ ಕುಸಿತದಾಖಲಾಗುತ್ತಿದ್ದು, ಬುಧವಾರ ಸೂಚ್ಯಂಕ್‌ 522.82 ಪಾಯಿಂಟ್ಸ್‌ ಕುಸಿತ ದೊಂದಿಗೆ 64,049.06 ಅಂಕಕ್ಕೆ ಮುಕ್ತಾಯ ಗೊಂಡರೆ, ನಿಫ್ಟಿ 159.60 ಪಾಯಿಂಟ್ಸ್‌ಗಳ ಇಳಿಕೆಯೊಂದಿಗೆ 19,122.15 ಅಂಕಕ್ಕೆ ಮುಕ್ತಾಯಗೊಂಡಿದೆ. ಇನ್ನು ಜಾಗತಿಕ ಪ್ರಕ್ಷುಬ್ಧತೆ ಕಾರಣದಿಂದಾಗಿ ಐಟಿ ಷೇರುಗಳ ಕುಸಿತ ದಾಖಲಾಗುತ್ತಿದ್ದು, ಹೂಡಿಕೆದಾರರು ಈಕ್ವಿಟಿ ಷೇರು ಮೌಲ್ಯಗಳನ್ನು ಕಡಿಮೆ ಮಾಡುತ್ತಿದ್ದಾರೆ. ಪರಿಣಾಮ ಸೆನ್ಸೆಕ್ಸ್‌ನ ಸಂಸ್ಥೆಗಳಾದ ಇನ್ಫೋಸಿಸ್‌ ಶೇ.2.76ರಷ್ಟು ಕುಸಿತ ದಾಖಲಿಸಿದ್ದರೆ, ಭಾರ್ತಿ ಏರಟೇಲ್‌, ಎನ್‌ಟಿಪಿಸಿ, ಟಾಟಾ ಮೋಟಾರ್ಸ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಐಸಿಐಸಿಐ ಬ್ಯಾಂಕ್‌, ಟೆಕ್‌ ಮಹೀಂದ್ರಾ, ಟೈಟಾನ್‌ ಹಾಗೂ ಆ್ಯಕ್ಸಿಸ್‌ ಬ್ಯಾಂಕ್‌ಗಳು ಕೂಡ ಕುಸಿತದಾಖಲಾದ ಪ್ರಮುಖ ಸಂಸ್ಥೆಗಳಾಗಿವೆ.

ಮತ್ತೂಂದೆಡೆ ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಸಂಘರ್ಷವೂ ಮುಂದುವರಿದಿರುವುದರಿಂದ ಮುಂದಿನ ಕೆಲ ದಿನಗಳೂ ಷೇರು ವಹಿವಾಟಿನಲ್ಲಿ ಕುಸಿತ ದಾಖಲಾಗುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next