Advertisement

ಶಾಲಾ ಪಠ್ಯಕ್ಕೆ ಯೋಗ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ

11:25 AM Jun 21, 2018 | udayavani editorial |

ಮುಂಬಯಿ : ಆರೋಗ್ಯವಂತ ದೇಶವನ್ನು ರೂಪಿಸಲು ಯೋಗವನ್ನು ಶಾಲಾ ಪಠ್ಯಕ್ಕೆ ಸೇರಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ದು ಇಂದಿಲ್ಲಿ ಹೇಳಿದರು. 

Advertisement

ಇಲ್ಲಿನ ಬಾಂದ್ರಾ ರಿಕ್ಲಮೇಶನ್‌ ಸೀಲಿಂಗ್‌ ಪ್ರೊಮೆನೇಡ್‌ನ‌ಲ್ಲಿ ಏರ್ಪಟ್ಟ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಭಾರತದ ಪ್ರಾಚೀನ ಆಯುರಾರೋಗ್ಯದ ಯೋಗವು ವಿಶ್ವಕ್ಕೆ ಭಾರತದಿಂದ ಸಂದಿರುವ ಅತ್ಯಮೂಲ್ಯ ಕೊಡುಗೆಯಾಗಿದೆ ಎಂದು ಹೇಳಿದರು. 

ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಅವರು ಕೂಡ ಕೆಲವೊಂದು ಯೋಗಾಸನಗಳನ್ನು ಕೈಗೊಂಡು ಆ ಬಳಿಕ ಮಾತನಾಡಿ, ಭಾರತದ ಪ್ರಾಚೀನ ಯೋಗ ವಿಜ್ಞಾನವು ಇಂದಿನ ಆಧುನಿಕ ಜಗತ್ತಿಗೆ ಬಹಳ ಮುಖ್ಯವಾಗಿದೆ ಎಂದುಹೇಳಿದರು. 

ಬಿಜೆಪಿ ಸಂಸದೆಯಾಗಿರುವ (ಉತ್ತರ ಮಧ್ಯ ಮುಂಬಯಿ) ಪೂನಂ ಮಹಾಜನ್‌, ಸ್ಥಳೀಯ ಶಾಸಕ ಮತ್ತು ಮುಂಬಯಿ ಬಿಜೆಪಿ ಮುಖ್ಯಸ್ಥ ಆಶಿಶ್‌ ಶೇಲಾರ್‌, ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next