Advertisement

ಕಾಸ್‌ ನಾವ್‌ ಇಸ್ಕೊಳ್ಳಲ್ಲ.. ಶ್ರುತಿ ವಿರುದ್ಧ ಮತದಾರ ಮಹಿಳೆಯರು ಕಿಡಿ

04:00 PM Apr 04, 2017 | Team Udayavani |

ಗುಂಡ್ಲುಪೇಟೆ : ವಿಧಾನಸಭಾ ಕ್ಷೇತ್ರದೆಲ್ಲೆಡೆ ಪ್ರಚಾರದ ಭರಾಟೆ ಜೋರಾಗಿದ್ದು , ಕಾಂಗ್ರೆಸ್‌ , ಬಿಜೆಪಿಯ ತಾರಾ ಪ್ರಚಾರಕರು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ನಟಿ, ಬಿಜೆಪಿ ನಾಯಕಿ ಶ್ರುತಿ ಅವರೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. 

Advertisement

ಮಹಿಳೆಯರ ತರಾಟೆ 
ಪ್ರಚಾರದ ವೇಳೆ ಶ್ರುತಿ ಅವರು ದುಡ್ಡು ಇಸ್ಕೊಂಡ್‌ ವೋಟ್‌ ಹಾಕ್ಬೇಡಿ ಅಂದರು. ಅಷ್ಟಕ್ಕೆ ಕೆಂಡಾಮಂಡಲರಾದ ಮಹಿಳೆಯರು ‘ಯಾರ್ರೀ ದುಡ್ಡ್ ತೆಗೋತಾರೆ..ನಾವು ಹೆಂಗ್ಸ್ರು ದುಡ್ಡ್ ಮುಟ್ಟೋದಿಲ್ಲ.. ಗಂಡ್ಸ್ರು ತಗೊಂಡ್ರೆ ಅವ್ರು ನಮ್ಗೆ ಲೆಕ್ಕಕ್ಕೆ ಇಲ್ಲ’ ಎಂದರು. 

‘ನಮ್ಮೂರಿಗೆ ಸರಿಯಾಗ್‌ ಒಂದ್‌ ಬಸ್‌ ಕೂಡಾ ಇಲ್ಲಾ…ನೀವ್‌ ಈಗ ವೋಟ್‌ ಕೇಳಕ್‌ ಬರ್ತೀರಿ , ಗೆದ್ರೆ ಅಭ್ಯರ್ಥಿ ಕೆಲ್ಸ ಮಾಡಿಲ್ಲ ಅಂದ್ರೆ ಬರ್ತೀರಾ..’ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 

ಸಮಾಧಾನವಾಗಿ ಮಹಿಳೆಯರನ್ನು ಸಂತೈಸಿದ ಶ್ರುತಿ ‘ನೀವೆಲ್ಲಾ ಕಿತ್ತೂರು ರಾಣಿ ಚೆನ್ನಮ್ಮಾ ಇದ್ದಹಾಗೆ . ಎಲ್ಲರೂ ಬಿಜೆಪಿಗೆ ಮತ ಕೊಡಿ ನಿಮ್ಮ ಸಮಸ್ಯೆ ಎಲ್ಲಾ ನಾವು ಬಗೆ ಹರಿಸುತ್ತೇವೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next