Advertisement

ವಾರಣಾಸಿಯಲ್ಲಿ ಶಾ ಎಲೆಕ್ಷನ್‌ “ಮಾಸ್ಟರ್‌ಕ್ಲಾಸ್‌’

10:26 PM Nov 10, 2021 | Team Udayavani |

ಲಕ್ನೋ: ಉತ್ತರ ಪ್ರದೇಶ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆ ಆರಂಭಿಸಿದ್ದು, ಅದೇ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ನ.12ರಂದು ವಾರಣಾಸಿಗೆ ತೆರಳಲಿದ್ದಾರೆ.

Advertisement

ಅಲ್ಲಿ ಅವರು ಬಿಜೆಪಿಯ ಸುಮಾರು 700 ನಾಯಕರಿಗೆ ಚುನಾವಣೆಯ ಕುರಿತಾಗಿ ಮಾಸ್ಟರ್‌ಕ್ಲಾಸ್‌ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉ.ಪ್ರದೇಶದ 98 ಜಿಲ್ಲೆಯ ಪಕ್ಷಾಧ್ಯಕ್ಷರು, 403 ಕ್ಷೇತ್ರಗಳ ಉಸ್ತುವಾರಿಗಳು, ಆರು ಪ್ರಾದೇಶಿಕ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿಯ ಎಲ್ಲ ಪ್ರಮುಖ ನಾಯಕರಿಗೆ ಸಭೆಗೆ ಆಹ್ವಾನ ನೀಡಲಾಗಿದೆ.

ಚುನಾವಣೆಗೆ ಯಾವ ರೀತಿಯಲ್ಲಿ ಪ್ರಚಾರ ನಡೆಸಬೇಕು, ಯಾವ ರೀತಿಯಲ್ಲಿ ಸಜ್ಜಾಗಬೇಕು ಎನ್ನುವ ಕುರಿತಾಗಿ ಸಭೆಯಲ್ಲಿ ಶಾ ಅವರು ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಮೋದಿಗೆ ಕೆಸಿಆರ್‌ ಸೆಡ್ಡು: ಬಿಜೆಪಿ ಆರೋಪ

Advertisement

ಹಾಗೆಯೇ ಮುಂದಿನ ತಿಂಗಳಿನಿಂದ ರಾಜ್ಯಾದ್ಯಂತ ಪರಿವರ್ತನಾ ಯಾತ್ರೆಯನ್ನು ನಡೆಸುವುದಕ್ಕೂ ಪಕ್ಷ ಸಿದ್ಧತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next