Advertisement

ಅಫ್ಘಾನ್ ನಲ್ಲಿ ಸಿಲುಕಿರುವ ಹಿಂದೂ, ಸಿಖ್‌ ಜನರ ರಕ್ಷಣೆಗೆ ಕ್ರಮ: ಕೇಂದ್ರ

09:28 AM Aug 17, 2021 | Team Udayavani |

ಹೊಸದಿಲ್ಲಿ: ಕಾಬೂಲ್‌ ನಿಂದ ವಾಣಿಜ್ಯಿಕ ವಿಮಾನ ಯಾನ ಶುರುವಾದ ಕೂಡಲೇ ಅಫ್ಘಾನ್ ನಲ್ಲಿರುವ ಹಿಂದೂ ಮತ್ತು ಸಿಖ್‌ ಸಮುದಾಯದವರನ್ನು ಆದ್ಯತೆಯಲ್ಲಿ ಕರೆ ತರಲಾಗುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗಚಿ ತಿಳಿಸಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ಆ ದೇಶದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈ ಮೀರುತ್ತಲೇ ಇದೆ. ಹೀಗಾಗಿ, ಅಲ್ಲಿರುವ ರಾಜತಾಂತ್ರಿಕ ಸಿಬ್ಬಂದಿ ಮತ್ತು ಭಾರತದ ನಾಗರಿಕರನ್ನು ಕರೆ ತರಲು ಪ್ರಯತ್ನಗಳನ್ನು ನಡೆಸಲಾಗುತ್ತದೆ. ಸದ್ಯ ವಾಣಿಜ್ಯಿಕ ವಿಮಾನಯಾನ ಸ್ಥಗಿತಗೊಳಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಭಾರತೀಯರಿಗೆ ದೂರವಾಣಿ ಸಂಖ್ಯೆಯನ್ನೂ ನೀಡಲಾಗಿದೆ ಎಂದು ಬಗಚಿ ತಿಳಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ಪೊಲೀಸ್ ಕಮಿಷನರ್ ರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು!

ತಮ್ಮವರನ್ನು ಕರೆಯಿಸಿಕೊಳ್ಳಲು ಯತ್ನ: ಯು.ಕೆ., ಆಸ್ಟ್ರೇಲಿಯಾ, ಸ್ವೀಡನ್‌, ನ್ಯೂಜಿಲೆಂಡ್‌, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳ ಸರ್ಕಾರಗಳು ಯುದ್ಧಗ್ರಸ್ತ ರಾಷ್ಟ್ರದಲ್ಲಿರುವ ತಮ್ಮ ತಮ್ಮ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್‌ ಕರೆಯಿಸಿಕೊಳ್ಳಲು ಶತ ಪ್ರಯತ್ನ ನಡೆಸಿವೆ. ಕಾಬೂಲ್‌ನಲ್ಲಿ ಕರ್ಫ್ಯೂ ಘೋಷಣೆ ಮಾಡಿರುವುದು ಎಲ್ಲಾ ರಾಷ್ಟ್ರಗಳಿಗೆ ತೊಂದರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next