Advertisement

ಗುಜರಾತ್‌ ವ್ಯಕ್ತಿಗಳಿಗೆ ಬಂಗಾಲ ಆಳಲು ಬಿಡಲ್ಲ

03:03 AM Jul 22, 2020 | Hari Prasad |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ರಾಜ್ಯದವರೇ ಆಳ್ವಿಕೆ ನಡೆಸಲಿದ್ದಾರೆ. ಹೊರಗಿನವರಿಗೆ (ಗುಜರಾತ್‌) ಆಡಳಿತ ನಡೆಸಲು ಅವಕಾಶ ಕೊಡುವುದೇ ಇಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

Advertisement

ಕೋಲ್ಕತಾದಲ್ಲಿ ಮಂಗಳವಾರ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯದ ಸಂಪನ್ಮೂಲಗಳನ್ನು ಕಿತ್ತುಕೊಂಡಿದೆ.

ಅದರ ವಿರುದ್ಧ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಜನರು ಪ್ರತೀಕಾರ ತೀರಿಸಲಿದ್ದಾರೆ ಎಂದಿದ್ದಾರೆ.

ರಾಜಸ್ಥಾನ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪ ಮಾಡಿದ ಟಿಎಂಸಿ ನಾಯಕಿ ಪ್ರತಿಪಕ್ಷಗಳು ಅಧಿಕಾರ ಇರುವ ರಾಜ್ಯಗಳಲ್ಲಿ ಸರಕಾರ ಪತನಗೊಳಿಸಲು ಕೇಂದ್ರ ಪ್ರಯತ್ನಿಸುತ್ತಿದೆ.

ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಹಣ ಬಲದ ಮೂಲಕ ಇಂಥ ಪ್ರಯತ್ನ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next