Advertisement

ವಾರಾಣಸಿಯಿಂದ ಯಾಕೆ ಸ್ಪರ್ಧಿಸಬಾರದು? ಪ್ರಿಯಾಂಕಾ ಗಾಂಧಿ

09:57 AM Mar 30, 2019 | Vishnu Das |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಾಣಸಿ ಕ್ಷೇತ್ರದಲ್ಲಿ ಯಾಕೆ ಸ್ಪರ್ಧೆ ಮಾಡಬಾರದು ..ಇದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್‌ ಕಾರ್ಯಕರ್ತರಿಗೆ ಕೇಳಿದ ಪ್ರಶ್ನೆ.

Advertisement

ತಳ ಮಟ್ಟದ ಕಾರ್ಯಕರ್ತರು ರಾಯ್‌ಬರೇಲಿಯಿಂದ ಕಣಕ್ಕಿಳಿಯುವಂತೆ ಒತ್ತಾಯ ಮಾಡಿದಾಗ ಪ್ರಿಯಾಂಕಾ ಅವರು ನಗುನಗುತ್ತಾ ಕಾರ್ಯಕರ್ತರಿಗೆ ಈ ಪ್ರಶ್ನೆ ಕೇಳಿದ್ದಾರೆ.

ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿರುವ ರಾಯ್‌ಬರೇಲಿಯಲ್ಲಿ ನೂರಾರು ಕಾರ್ಯಕರ್ತರು ಪ್ರಿಯಾಂಕಾ ಅವರು ಕಣಕ್ಕಿಳಿಯುವಂತೆ ಒತ್ತಾಯ ಮಾಡಿದ್ದರು.

ಎಲ್ಲಿಯಾದರೂ ಪ್ರಿಯಾಂಕಾ ವಾರಾಣಸಿಯಿಂದ ಕಣಕ್ಕಿಳಿದರೆ ಅದು ಹೈ ವೋಲ್ಟೇಜ್‌ ಕದನವಾಗುವುದರಲ್ಲಿ ಅನುಮಾನವಿಲ್ಲ. ಆದರೆ ಈಗ ಇದೊಂದು ಕೇವಲ ಹೇಳಿಕೆ ಯಷ್ಟೇ..!

Advertisement

Udayavani is now on Telegram. Click here to join our channel and stay updated with the latest news.

Next