Advertisement

ಕೂಲಿ ಅರಸಿ ನಗರಕ್ಕೆ ಬಂದಿದ್ದ ದಂಪತಿಯ ಪುತ್ರಿ ಕಾರಿಗೆ ಬಲಿ 

11:39 AM Feb 26, 2017 | |

ಬೆಂಗಳೂರು: ಜಾಲಹಳ್ಳಿ ಠಾಣೆ ವ್ಯಾಪ್ತಿಗಳಲ್ಲಿ ಶುಕ್ರವಾರ ಮಧ್ಯಾಹ್ನನ ನಡೆದ ಅಪಘಾತದಲ್ಲಿ  ವರ್ಷದ ಬಾಲಕಿ ಸೇರಿದಂತೆ ಮೂವರು ಮೃತಪಟ್ಟಿದೆ. ಕವಿತಾ ಸಾವಿಗೀಡಾದ ಬಾಲಕಿ. ಹೆಸರುಘಟ್ಟ ಸಮೀಪದ ಪುಟ್ಟಸ್ವಾಮಿ ಲೇಔಟ್‌ನಲ್ಲಿ ಕಾರು ಹರಿದು ಮೂರು ವರ್ಷದ ಬಾಲಕಿ ಕವಿತಾ ಮೃತಪಟ್ಟಿದ್ದಾಳೆ.

Advertisement

ಕವಿತಾ, ಯಾದಗಿರಿ ಮೂಲದ ಅಶೋಕ್‌ ಹಾಗೂ ರೇಣುಕಾ ದಂಪತಿಯ ಪುತ್ರಿ. ಅಶೋಕ್‌ ದಂಪತಿ ಒಂದೂವರೆ ತಿಂಗಳ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿತ್ತು. ಪುಟ್ಟಸ್ವಾಮಿ ಲೇಔಟ್‌ನಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ದಂಪತಿ ಕೆಲಸಕ್ಕಿದ್ದರು. ಶನಿವಾರ ಮಗುವನ್ನು ಆಟವಾಡಲು ಬಿಟ್ಟು ದಂಪತಿ ಕೆಲಸದಲ್ಲಿ ತೊಡಗಿದ್ದರು.

ಮಧ್ಯಾಹ್ನ 1.30ರ ಸುಮಾರಿಗೆ ಕವಿತಾ ಕಟ್ಟಡದ ಮುಂದೆ ಆಟವಾಡುತ್ತಿದ್ದಳು. ಅದೇ ವೇಳೆ ನಿರ್ಮಾಣ ಹಂತದ ಕಟ್ಟಡದ ಮಾಲೀಕ ರಾಮಚಂದ್ರ ಅವರು ಅಲ್ಲಿಯೇ ಇದ್ದ ಮರದ ಕೆಳಗೆ ಕಾರು ನಿಲ್ಲಿಸುವ ಸಲುವಾಗಿ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ.

ಈ ವೇಳೆ ಹಿಂದೆ ಇದ್ದ ಬಾಲಕಿ ಮೇಲೆ ಕಾರು ಹರಿದಿದ್ದು, ಗಂಭೀರವಾಗಿ ಗಾಯ­ಗೊಂಡಿದ್ದ ಆಕೆಯನ್ನು ಅದೇ ಕಾರಿನಲ್ಲಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ರಾಮ­ಚಂದ್ರ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.  
 

Advertisement

Udayavani is now on Telegram. Click here to join our channel and stay updated with the latest news.

Next