Advertisement

ನಾನು ಎಷ್ಟು ಬೇಕಾದರೂ ಕೇಸರಿ ಶಾಲು ಹಂಚ್ತೇನೆ: ಡಿಕೆಶಿಗೆ ಈಶ್ವರಪ್ಪ ತಿರುಗೇಟು

06:23 PM Feb 09, 2022 | Team Udayavani |

ಬೆಂಗಳೂರು : ನಾನು ಎಷ್ಟು ಬೇಕಾದರೂ ಕೇಸರಿ ಶಾಲು ಹಂಚ್ತೇನೆ, ನನ್ನ ಸ್ವಾತಂತ್ರ್ಯ ಕೇಳಲು ಡಿ.ಕೆ. ಶಿವಕುಮಾರ್ ಗೆ ಅಧಿಕಾರ ನೀಡಿದ್ದು ಯಾರು? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಂಡೆ ಲೂಟಿ ಮಾಡಿದ ವ್ಯಕ್ತಿ ಶಿವಕುಮಾರ್. ತಿಹಾರ್ ಜೈಲಿಗೆ ಹೋಗಿ ಬಂದವರು ಶಿವಕುಮಾರ್, ಇ ಡಿ ದಾಳಿ ಕೂಡ  ಶಿವಕುಮಾರ್ ಮೇಲೆ ಆಗಿತ್ತು ಎಂದು ಆರೋಪಿಸಿದರು.

ಶಿವಕುಮಾರ್ ಗೆ ತಾಕತ್ತು, ಧಮ್ ಇದ್ರೆ  ಮಸೀದಿಗೆ ಗುಲ್ಬಾರ್ಗಾ ಶಾಸಕಿಯನ್ನ ಕರ್ಕೊಂಡು ಹೋಗ್ಲಿ.ಶಾಲೆಗೆ ಸಮವಸ್ತ್ರ ಧರಿಸಿ ಹೋಗಬೇಕು.ಕೇಸರಿ ಧ್ವಜ ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಹಾರಿಸ್ತೇವೆ ಎಂದು ಸವಾಲು ಹಾಕಿದರು.

ಸಿದ್ಧರಾಮಯ್ಯನನ್ನು ಮೀರಿಸಿದ ಸುಳ್ಳುಗಾರ ಶಿವಕುಮಾರ್.ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿಲ್ಲ. ಶಿವಕುಮಾರ್ ಗಿಂತ ಹೆಚ್ಚಿನ ದೇಶ ಭಕ್ತಿ ನನಗಿದೆ. ರಾಷ್ಟ್ರ ಧ್ವಜವನ್ನು ಹಾರಿಸಲು ನಿಯಮ ಇದೆ .ಕಾಂಗ್ರೆಸ್ ನವರು ಹಿಂದೂಸ್ಥಾನ- ಪಾಕಿಸ್ತಾನ ಮಾಡಿದರು ಎಂದು ಆರೋಪಿಸಿದರು.

ಹಿಜಾಬ್ ಹಿಂದೆ ಸಂಘ ಪರಿವಾರದ ನಾಯಕರು ಇದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೆಂಡ ಕಾರಿದ ಈಶ್ವರಪ್ಪ, ಯಾವನೋ ಕುಡುಕ ಹೇಳ್ತಾನೆ… ರೀ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next