Advertisement

ಜಮಖಂಡಿ ಫಲಿತಾಂಶದ ಬಳಿಕ ಏನಾಗಲಿದೆ? ಶೆಟ್ಟರ್ ಹೇಳಿದ ಭವಿಷ್ಯ

04:13 PM Oct 29, 2018 | Sharanya Alva |

ಬಾಗಲಕೋಟೆ:ಜಮಖಂಡಿ ವಿಧಾನಸಭಾ ಉಪಚುನಾವಣೆಯ ಫಲಿತಾಂಶದಿಂದ ರಾಜಕೀಯ ಧ್ರುವೀಕರಣವಾಗಲಿದೆ ಎಂದು ಭವಿಷ್ಯ ನುಡಿದಿರುವ ಬಿಜೆಪಿ ಮುಖಂಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ನವೆಂಬರ್ 6 ಸಮ್ಮಿಶ್ರ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ.

Advertisement

ಸೋಮವಾರ ಜಮಖಂಡಿಯ ತುಬಚಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡುತ್ತ, ಬಿಜೆಪಿಯ 105 ಸಂಖ್ಯೆ 113ಕ್ಕೆ ಹೇಗೆ ಏರುತ್ತದೆ ಎಂಬುದನ್ನು ಕಾದು ನೋಡಿ ಎಂದರು.

ಜಮಖಂಡಿಯ ಫಲಿತಾಂಶದಿಂದ ಬಿಜೆಪಿ ಒಟ್ಟು ಸ್ಥಾನ 104ರಿಂದ 105ಕ್ಕೆ ಏರಲಿದೆ. ಒಂದು ಸ್ಥಾನದಿಂದ ರಾಜಕೀಯವಾಗಿ ಮಹತ್ವದ ಬದಲಾವಣೆ ಆಗಲಿದೆ. ಅಲ್ಲದೇ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಏರಬೇಕೆಂಬ ಮಹತ್ವಕಾಂಕ್ಷೆ ಇಲ್ಲ, ಆಪರೇಶನ್ ಕಮಲ ಕೂಡಾ ಮಾಡಲ್ಲ ಎಂದಿರುವ ಅವರು ಉಪಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next