Advertisement

ಲೋಕಸಭಾ ಉಪಚುನಾವಣೆ ಅನಗತ್ಯವಾಗಿತ್ತು : ಬಿಎಸ್‌ವೈ ಅಸಮಾಧಾನ 

02:05 PM Oct 07, 2018 | Team Udayavani |

ಬೆಂಗಳೂರು : ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಚುನಾವಣಾ ಆಯೋಗದ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು  ಅಸಮಾಧಾನ ಹೊರ ಹಾಕಿದ್ದಾರೆ. 

Advertisement

ಭಾನುವಾರ ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ಅವರು ನಾವು ಉಪಚುನಾವಣೆ ಇರುವುದಿಲ್ಲ ಎಂದು ಭಾವಿಸಿದ್ದೆವು. ಕೇವಲ 5 ತಿಂಗಳಿಗಾಗಿ ಚುನಾವಣೆ ನಡೆಸಬೇಕಾಗಿದೆ. ಯಾವುದೇ ಪಕ್ಷದವರಿಗೂ ಚುನಾವಣೆ ಬಗ್ಗೆ ಆಸಕ್ತಿಯೇ ಇಲ್ಲ ವಾಗಿದೆ.ಅನೀವಾರ್ಯವಾಗಿ ಚುನಾವಣಾ ಆಯೋಗದ ಕ್ರಮವನ್ನು ಸ್ವಾಗತಿಸಬೇಕಾಗಿದೆ ಎಂದರು. 

ಶಿವಮೊಗ್ಗದ ಅಭ್ಯರ್ಥಿಯನ್ನು ಇಂದು ಅಂತಿಮಗೊಳಿಸುತ್ತೇವೆ. ನಾಳೆ ಮಂಡ್ಯ ಮತ್ತು ಬಳ್ಳಾರಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ ಎಂದರು. 

ಚುನಾವಣೆ ಅಗತ್ಯವಿತ್ತೆ? 

ನವೆಂಬರ್ 6 ರಂದು ಮತ ಎಣಿಕೆಯಲ್ಲಿ‌ ಆಯ್ಕೆಯಾಗುವ ಕರ್ನಾಟಕದ ಮೂರು ಲೋಕಸಭಾ ಸದಸ್ಯರ ಅವಧಿ ಎಷ್ಟಿರುತ್ತದೆ?  ಗರಿಷ್ಟ 4 ತಿಂಗಳು.‌  ಉಪಚುನಾವಣೆ ಅಗತ್ಯವಿತ್ತೇ? ಎಂದು ಬಿಜೆಪಿ ನಾಯಕ ಸುರೇಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ. 

Advertisement

ನ. 3 ರಂದು ಕರ್ನಾಟಕ ದಲ್ಲಿನ ಮೂರು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನ ಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳ ಫ‌ಲಿತಾಂಶ ನ. 6ಕ್ಕೆ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next