Advertisement

ಬಡವರ ಕಲ್ಯಾಣವೇ ಬಿಜೆಪಿ ಗುರಿ: ಶಾಸಕ ತೇಲ್ಕೂರ

09:52 AM Jun 11, 2018 | Team Udayavani |

ಸೇಡಂ: ಬಡವರ ಕಲ್ಯಾಣವೇ ಬಿಜೆಪಿಯ ಪ್ರಮುಖ ಗುರಿಯಾಗಿದೆ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

Advertisement

ತಾಲೂಕಿನ ಬುರಗಪಲ್ಲಿ ಗ್ರಾಮದಲ್ಲಿ ಆಯೋಜಿಸಿದ ಪ್ರಧಾನ ಮಂತ್ರಿ ಉಜ್ಜಲ ಯೋಜನೆಯ ಗ್ಯಾಸ್‌ ಸಿಲೆಂಡರ್‌ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಧಾನಸಭೆ ವ್ಯಾಪ್ತಿಯ ಬಹುತೇಕ ಗ್ರಾಮಗಳನ್ನು ಬಯಲು ಶೌಚ ಮುಕ್ತ ಮಾಡುವ ಉದ್ದೇಶ ಹೊಂದಲಾಗಿದೆ. ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಜನರ ಏಳ್ಗೆಗಾಗಿ ರೂಪಿಸಲಾಗಿದೆ. ಅವುಗಳನ್ನು ಅರಿತು ಸದುಪಯೋಗ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ನೂತನ ಶಾಸಕ ರಾಜಕುಮಾರ ಪಾಟೀಲರಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಅಭಿನಂದಿಸಲಾಯಿತು. ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ, ತಾಪಂ ಸದಸ್ಯ ನಾಗರೆಡ್ಡಿ ದೇಶಮುಖ, ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಬಸವರಾಜ ಭೂತಪುರ, ಬಸರೆಡ್ಡಿ ಮಾಲಿಪಾಟೀಲ ಇದ್ದರು. 

ಶಕ್ತಿ ಕೇಂದ್ರದ ಅಧ್ಯಕ್ಷ ರಘುನಾಥರೆಡ್ಡಿ ಪೊಲೀಸ ಪಾಟೀಲ ಸ್ವಾಗತಿಸಿದರು. ವಿಷ್ಣು ನಿರೂಪಿಸಿದರು. ತಿರುಪತರೆಡ್ಡಿ ಬುರುಗಪಲ್ಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next