Advertisement

ಆರಂಭವಾಗದ ಒಳಹರಿವು: ನೀರು ಪೂರೈಕೆಗೆ ಸಮಸ್ಯೆ

10:41 AM Jun 06, 2017 | Harsha Rao |

ಉಡುಪಿ: ಉಡುಪಿಯಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಮತ್ತೆ ನಗರದಲ್ಲಿ ನೀರು ಪೂರೈಕೆಗೆ ಸಮಸ್ಯೆಯಾಗಿದ್ದು, ಆದರೂ 4 ದಿನಕ್ಕೊಮ್ಮೆ ನೀರು ಪೂರೈಸಲು ನಗರಸಭೆ ಬದ್ಧವಾಗಿದೆ ಎಂದು ನಗರಾಡಳಿತ ತಿಳಿಸಿದೆ. 

Advertisement

ಮುಂಗಾರು ಆರಂಭವಾದರೂ ಕಾರ್ಕಳ ಭಾಗದಿಂದ ಸ್ವರ್ಣಾ ನದಿಯ ಗುಂಡಿಗಳಲ್ಲಿ ಒಳಹರಿವು ಆರಂಭವಾಗಿಲ್ಲ. ಆದ್ದರಿಂದ ಆ ಗುಂಡಿ ಗಳಲ್ಲಿದ್ದ ನೀರೆಲ್ಲ ಪಂಪಿಂಗ್‌ ಮಾಡಿ ಖಾಲಿಯಾಗಿದ್ದು, ಅಲ್ಪ ಸ್ವಲ್ಪ ಮಳೆ ಬಂದಿದ್ದರಿಂದ ಆ ಗುಂಡಿಗಳಲ್ಲಿ  ಅಲ್ಪ  ಪ್ರಮಾಣದ ನೀರು ಸಂಗ್ರಹಗೊಂಡಿದೆ. ಅದನ್ನೇ ಡ್ರೆಜ್ಜಿಂಗ್‌ ಮಾಡಿ ನೀರು ಪೂರೈಸಲಾಗುವುದು.

ರವಿವಾರ ಹಾಗೂ ಸೋಮವಾರ ನಗರಕ್ಕೆ ನೀರು ಸರಬರಾಜು ಮಾಡಲಾಗಿದೆ. ಗುರುವಾರ ಹಾಗೂ ಶುಕ್ರವಾರಕ್ಕೆ ನೀರು ಪೂರೈಕೆ ಆ ಗುಂಡಿಗಳಿಂದ ಪಂಪಿಂಗ್‌ ಮಾಡಿ ಪೂರೈಸಲು ವ್ಯವಸ್ಥೆ  ಮಾಡಲಾಗುವುದು ಎಂದು ಪರಿಸರ ಅಭಿಯಂತ ರಾಘವೇಂದ್ರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next