Advertisement

ದಕ್ಷಿಣ, ವಾಯುವ್ಯ ವಿಭಾದಲ್ಲಿ ನೀರಿನ ಅದಾಲತ್‌

12:06 PM Jul 23, 2018 | Team Udayavani |

ಬೆಂಗಳೂರು: ಜಲಮಂಡಳಿಯು ಸೋಮವಾರ (ಜು. 23) ಬೆಳಗ್ಗೆ 9.30ರಿಂದ 11 ಗಂಟೆವರೆಗೆ ದಕ್ಷಿಣ-4 ಹಾಗೂ ವಾಯುವ್ಯ-1 ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕದಲ್ಲಿನ ವಿಳಂಬ, ಗೃಹಬಳಕೆ ಗೃಹೇತರ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್‌ ಹಮ್ಮಿಕೊಂಡಿದೆ.

Advertisement

ದಕ್ಷಿಣ-4 ಉಪಭಾಗದ ವ್ಯಾಪ್ತಿಯ ಎಚ್‌ಎಸ್‌ಆರ್‌ ಲೇಔಟ್‌, ಕೋಡಿಚಿಕ್ಕನಹಳ್ಳಿ ಸೇವಾಠಾಣೆಗಳಿಗೆ ಸಂಬಂಧಿಸಿದಂತೆ ಬಿಟಿಎಂ 2ನೇ ಹಂತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ, ವಾಯುವ್ಯ-1 ಉಪಭಾಗ ವ್ಯಾಪ್ತಿಯ ಕೇತಮಾರನಹಳ್ಳಿ, ಮಹಾಲಕ್ಷ್ಮೀ ಲೇಔಟ್‌, ರಾಜಾಜಿನಗರ 1-2,

ನಂದಿನಿ ಲೇಔಟ್‌-1, ಸೇವಾಠಾಣೆಗಳಿಗೆ ಸಂಬಂಧಿಸಿದಂತೆ ರಾಜಾಜಿನಗರ 1ನೇ ಬ್ಲಾಕ್‌, ಕೇತಮಾರನ ಹಳ್ಳಿ, ವಿದ್ಯಾವರ್ಧಕ ಶಾಲೆ ಮುಂಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಅದಾಲತ್‌ ನಡೆಯಲಿದೆ. ಮಾಹಿತಿಗೆ ದೂ: 22945143 (ದಕ್ಷಿಣ), 23491123 (ವಾಯುವ್ಯ-1) ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next