Advertisement

Nobel ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ.ಅಮರ್ತ್ಯ ಸೇನ್‌ಗೆ ವಿವಿ ನೋಟಿಸ್‌

08:43 PM Apr 20, 2023 | Team Udayavani |

ಕೋಲ್ಕತಾ/‌ನವದೆಹಲಿ: ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ.ಅಮರ್ತ್ಯ ಸೇನ್‌ ಅವರು ವಿಶ್ವಭಾರತಿ ವಿವಿಯಲ್ಲಿ 0.13 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದೆ. ಏ.19ರಂದು ನೋಟಿಸ್‌ ನೀಡಲಾಗಿದ್ದು, ಮೇ 6ರ ಒಳಗಾಗಿ ಅತಿಕ್ರಮಿಸಿರುವ ಜಮೀನು ತೆರವುಗೊಳಿಸಬೇಕು ಎಂದು ಅದರಲ್ಲಿ ಸೂಚಿಸಲಾಗಿದೆ. ಸಿಎಜಿ ವರದಿಯ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಅಮರ್ತ್ಯ ಸೇನ್‌ ಮತ್ತು ವಿವಿಯ ಜಮೀನು ಅತಿಕ್ರಮಿಸಿಕೊಂಡವರೆಲ್ಲರಿಗೂ ನೋಟಿಸ್‌ ನೀಡಲಾಗಿದೆ. ತೆರವುಗೊಳಿಸಿದ ಬಳಿಕ ಅದರ ಬಗ್ಗೆ ವರದಿ ಸಲ್ಲಿಸಬೇಕಾಗಿದೆ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಮೋದಿ ಸರ್ಕಾರ ವಿನಾ ಕಾರಣ ಸೇನ್‌ ಅವರಿಗೆ ತೊಂದರೆ ನೀಡುತ್ತಿದೆ ಎಂದು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next