Advertisement

ಶ್ರೀಕೃಷ್ಣ ಮಠಕ್ಕೆ ಡಾ|ವೀರೇಂದ್ರ ಹೆಗ್ಗಡೆ ಭೇಟಿ

01:58 AM Feb 12, 2022 | Team Udayavani |

ಉಡುಪಿ: ಶ್ರೀ ಕೃಷ್ಣಮಠಕ್ಕೆ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ಆಗಮಿಸಿದಾಗ ವಾದ್ಯ ಘೋಷ ಸಹಿತ ಸ್ವಾಗತಿಸಲಾಯಿತು.

Advertisement

ಶ್ರೀಮಠದ ದಿವಾನ ವರದರಾಜ ಭಟ್‌ ಮತ್ತು ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಬರಮಾಡಿಕೊಂಡು ದೇವರ ದರ್ಶನ ಮಾಡಿಸಿದರು. ಅನಂತರ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

ಇದನ್ನೂ ಓದಿ:ಗಮನಿಸುತ್ತಿದ್ದೇವೆ, ಕೆಲ ಮಕ್ಕಳ ಪೋಷಕರು ಮತೀಯ ಸಂಘಟನೆಯಲ್ಲಿದ್ದಾರೆ : ಆರಗ ಜ್ಞಾನೇಂದ್ರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾ.ನಿ. ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌, ಜಿಲ್ಲಾ ನಿರ್ದೇಶಕ ಗಣೇಶ್‌, ಪ್ರಾದೇಶಿಕ ನಿರ್ದೇಶಕ ವಸಂತ್‌ ಸಾಲ್ಯಾನ್‌, ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ವಿಷ್ಣು ಪಾಡಿಗಾರ್‌, ವಾಸುದೇವ ಪೆರಂಪಳ್ಳಿ, ಮುರಳಿ ಕಡೆಕಾರ್‌, ಗಣೇಶ್‌ ರಾವ್‌, ಗಂಗಾಧರ್‌ ರಾವ್‌ ಉಪಸ್ಥಿತರಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next