Advertisement

ವಸಾಹತುಶಾಹಿ ಹೆಸರುಗಳ ಬದಲಾವಣೆಗೆ ಮುಂದಾದ ಧಾಮಿ

07:44 PM Oct 29, 2022 | Team Udayavani |

ಡೆಹ್ರಾಡೂನ್‌: ಬ್ರಿಟಿಷರ ವಸಾಹತುಶಾಹಿಯನ್ನು ನೆನಪಿಸುವ ಎಲ್ಲ ಹೆಸರುಗಳನ್ನು ಮತ್ತು ಲಾಂಛನಗಳನ್ನು ಮರುನಾಮಕರಣಗೊಳಿಸುವಂತೆ ಅಥವಾ ತೆಗೆದು ಹಾಕುವಂತೆ ರಾಜ್ಯದ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ಗುಲಾಮಗಿರಿಯ ಸಂಕೇತವಾಗಿರುವ ಹಳೆಯ ಹೆಸರುಗಳನ್ನು ಬದಲಾಯಿಸಲಾಗಿದೆ,’ ಎಂದರು.

“ಇದೇ ರೀತಿಯಲ್ಲಿ ಗುಲಾಮಗಿರಿಯ ಸಂಕೇತವಾಗಿರುವ ಹೆಸರುಗಳ ಬಗ್ಗೆ ಶೀಘ್ರ ವರದಿ ಸಲ್ಲಿಸುವಂತೆ ಉತ್ತರಾಖಂಡದ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ. ಅಲ್ಲದೇ ನಾವು ಈ ಹೆಸರುಗಳನ್ನು ಬದಲಿಸಲಿದ್ದೇವೆ,’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next