Advertisement

ಕನ್ನಡಿಗರನ್ನು ಒಗ್ಗಟ್ಟು ಮಾಡುವ ಕೆಲಸ ಮಾಡಬೇಕಾಗಿದೆ: ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ

05:34 PM Dec 07, 2021 | Team Udayavani |

ಪಣಜಿ: ವಾಸ್ಕೊ ಗೋವಾ ಕನ್ನಡ ಸಂಘ ಪುನಶ್ಛೇತನಗೊಳಿಸಿ ಕನ್ನಡಿಗರನ್ನು ಒಗ್ಗಟ್ಟು ಮಾಡುವ ಕೆಲಸ ಮಾಡಬೇಕಾಗಿದೆ ಎಂದು ವಿಜಯಪುರ ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಕರೆ ನೀಡಿದರು.

Advertisement

ವಾಸ್ಕೊದಲ್ಲಿ ಕನ್ನಡಿಗರು ಆಯೋಜಿಸಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಾಸ್ಕೊ ಕನ್ನಡ ಸಂಘದ ಸ್ವಂತ ಕಟ್ಟಡವಿದ್ದು ಆ ಕಟ್ಟಡ ಶಿಥಿಲಾವಸ್ಥೆಗೆ ಬಂದಿದೆ. ಅದನ್ನು ಮರು ಕಟ್ಟಡ ಮಾಡಿ ಗೋವಾ ಕನ್ನಡಿಗರ ಆಸ್ತಿಯನ್ನು ಕಾಪಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಪ್ರಮುಖ ದಾಜಿ ಸಾಲಕರ್ ಮಾತನಾಡಿ- ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆನಿಂತಿದ್ದಾರೆ. ಗೋವಾ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾತ್ರ ಮಹತ್ವದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಕನ್ನಡಿಗರಾದ ನಾಗರಾಜ್ ಗೋಂದಕರ್ ಮತ್ತಿತರರು ಉಪಸ್ಥಿತರಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಶೃದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next