Advertisement

ಉಡುಪಿ, ಮಣಿಪಾಲ: ಮಟ್ಕಾ ಅಡ್ಡೆಗೆ ದಾಳಿ

11:50 AM Aug 23, 2017 | |

ಉಡುಪಿ: ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ನಾಲ್ಕು ಕಡೆಗಳಿಗೆ (ಉಡುಪಿ ಸಿಟಿ, ಸರ್ವೀಸ್‌, ಕೆಎಸ್ಸಾರ್ಟಿಸಿ ಮತ್ತು ಮಣಿಪಾಲ ಬಸ್ಸು ನಿಲ್ದಾಣ) ಆ. 21ರಂದು ಉಡುಪಿ ಮತ್ತು ಮಣಿಪಾಲ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಮಣಿಪಾಲ ಬಸ್ಸು ನಿಲ್ದಾಣ
ಮಣಿಪಾಲ ಬಸ್ಸು ನಿಲ್ದಾಣದ ಸಮೀಪದಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಉಪ್ಪೂರು ತೆಂಕಬೆಟ್ಟುವಿನ ಅಂತೋನಿ ಡಿಸೋಜ (35) ನನ್ನು  ಮಣಿಪಾಲ ಪೊಲೀಸರು ಬಂಧಿಸಿದ್ದು, 850 ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ.

ಉಡುಪಿ ಸಿಟಿ ಬಸ್‌ ನಿಲ್ದಾಣ
ಉಡುಪಿ ಸಿಟಿ ಬಸ್ಸು ನಿಲ್ದಾಣದ ಸಮೀಪದಲ್ಲಿ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ಬಲಾಯಿಪಾದೆಯ ಕರಿಯಪ್ಪ (35) ನನ್ನು ಬಂಧಿಸಿದ್ದು, 1,295 ರೂ. ನಗದನ್ನು ಉಡುಪಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 
ಮಟ್ಕಾದಿಂದ ಬಂದ ಹಣವನ್ನು ಸಂಜೀವ ದೇವಾಡಿಗ ಚಿಟಾ³ಡಿ ಅವರಿಗೆ ಕಮಿಶನ್‌ ಆಸೆಗೋಸ್ಕರ ನೀಡುತ್ತಿದ್ದೆ ಎಂದು ಆರೋಪಿಯು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಉಡುಪಿ ಸರ್ವೀಸ್‌ಬಸ್‌ ನಿಲ್ದಾಣ
ಉಡುಪಿ ಸರ್ವೀಸ್‌ ಬಸ್‌ ನಿಲ್ದಾಣದ ಬಳಿ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ಗಣೇಶ್‌ ಮಲ್ಪೆ (25) ಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದು, 1,160 ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಅವರು ಕೂಡ ಆಟದ ಹಣವನ್ನು ಸಂಜೀವ ದೇವಾಡಿಗ ಚಿಟಾ³ಡಿ ಅವರಿಗೆ ನೀಡುತ್ತಿದ್ದುದಾಗಿ ಪೊಲೀಸ್‌ ತನಿಖೆಯಲ್ಲಿ ಹೇಳಿದ್ದಾರೆ.

ಕೆಎಸ್ಸಾರ್ಟಿಸಿ ಜಟಕಾ ಸ್ಟಾಂಡ್
ಉಡುಪಿಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿಯ ಜಟಕಾ ಸ್ಟಾಂಡ್‌ಗೆ ನಗರ ಠಾಣೆ ಪೊಲೀಸರು ದಾಳಿ ನಡೆಸಿದರು.
ಚಿಟಾ³ಡಿ ಗ್ರಾಮದ ಸಂಜೀವ (60) ಅವರನ್ನು ಬಂಧಿಸಿದ್ದು, 855 ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಅವರು ಆಟದಿಂದ ಬಂದ ಹಣವನ್ನು ಕಮಿಶನ್‌ ಆಸೆಗೆ ಲಿಯೋ ಕರ್ನೇಲಿಯೋ ಅವರಿಗೆ ನೀಡುತ್ತಿದ್ದುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next