Advertisement

ಉಡುಪಿ: ಹಿಂದೂ ಜನಜಾಗೃತಿ ಪ್ರತಿಭಟನೆ

08:10 AM Mar 23, 2018 | Team Udayavani |

ಉಡುಪಿ: ರೋಹಿಂಗ್ಯ ಮುಸಲ್ಮಾನರಿಗೆ ವಸತಿ ನಿರ್ಮಿಸಿಕೊಳ್ಳಲು ನೀಡಿರುವ ಅನುಮತಿಯನ್ನುಮತ್ತು ಹಜ್‌ ಯಾತ್ರೆ ನಿಮಿತ್ತ ವಿಮಾನ ಬಾಡಿಗೆಯಲ್ಲಿ ನೀಡಲಾಗಿರುವ ರಿಯಾಯತಿಯನ್ನು  ತತ್‌ಕ್ಷಣ ರದ್ದುಪಡಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಉಡುಪಿ ಸಮನ್ವಯಕರಾದ ವಿಜಯ್‌ ಕುಮಾರ್‌ ಆಗ್ರಹಿಸಿದ್ದಾರೆ. 

Advertisement

ಉಡುಪಿಯಲ್ಲಿ ಅಜ್ಜರಕಾಡಿನ ಹುತಾತ್ಮ ಸೈನಿಕ ಸ್ಮಾರಕದ ಮುಂದೆ  ನಡೆದ ರಾಷ್ಟ್ರೀಯ ಹಿಂದೂ ಆಂದೋಲನೆಯಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರಕಾರ ಹಜ್‌ ಯಾತ್ರೆಗೆ ನೀಡುವ ಅನುದಾನವನ್ನು ನಿಲ್ಲಿಸಿತು.  ಆದರೂ ಮತ್ತೆ  ರಿಯಾಯತಿ ನೀಡುವುದಾಗಿ ಘೋಷಿಸಿದೆ. ಇದನ್ನು ರದ್ದುಪಡಿಸಬೇಕೆಂದರು.
 
ರೊಹಿಂಗ್ಯಾ ಮುಸಲ್ಮಾನರಿಗೆ ಬೇರೆ ಬೇರೆ ರಾಜ್ಯಗಳಲ್ಲಿ ವಸತಿ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಇವರು ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಮಾಡಿದರೆ ಇದನ್ನು ತಡೆಯುವವರಾರು ಎಂದು ರಾಮ ಶೆಟ್ಟಿಗಾರ್‌ ಪ್ರಶ್ನಿಸಿದರು. ಇದನ್ನು ರದ್ದುಪಡಿಸಿ ಇವರನ್ನು ದೇಶದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದರು.  ಭದ್ರತಾ ದೃಷ್ಟಿಯಿಂದ ಭಾರತದಲ್ಲಿ ಇವರಿಗೆ ಅವಕಾಶ ನೀಡಬಾರದೆಂದು ಇಸ್ಕಾನ್‌ನ ಗೋವಿಂದದಾಸ್‌ ಆಗ್ರಹಿಸಿದರು. 

ಅಂದೋಲನದಲ್ಲಿ ಮಾತಾ ಅಮೃತಾನಂದಮಯೀ ಬಳಗದ ಆನಂದ ಅಮಿನ್‌ ಇತರರು  ಉಪಸ್ಥಿತರಿದ್ದರು. ವಿಶ್ವನಾಥ್‌ ನಾಯಕ್‌ ನಿರೂಪಿಸಿದರು. ಅಂದೋಲನದ ನಂತರ ಮನವಿ ಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next