Advertisement

ಒಬ್ಬ ದೇಶ,ಇನ್ನೊಬ್ಬ ರಾಜ್ಯ ಲೂಟಿ ಮಾಡಿದ:ಯುಪಿಯಲ್ಲಿ ಶಾ ವಾಗ್ದಾಳಿ 

09:30 AM Feb 04, 2017 | |

ಮೀರತ್‌ : ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ಚುನಾವಣಾ ಪೂರ್ವ  ಮೈತ್ರಿಯ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಕಿಡಿ ಕಾರಿದ್ದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ವಿರುದ್ಧ ತೀವ್ರ ವಾಗ್ದಾಳಿ  ನಡೆಸಿದ್ದಾರೆ. 

Advertisement

ಇಬ್ಬರು ರಾಜಕುಮಾರರ ಪೈಕಿ ಒಬ್ಟಾತ ದೇಶವನ್ನು ಲೂಟಿಗೈದಿದ್ದು  ,ಇನ್ನೋಬ್ಬ ರಾಜ್ಯ ಲೂಟಿ ಗೈದಿದ್ದು ಇನ್ನೇನು ಲೂಟಿ ಮಾಡುವ ಉದ್ದೇಶ ಇಟ್ಟುಕೊಂಡು ಜೊತೆಯಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ‘ಟೇಕ್‌ ಮನಿ ಎಂಡ್‌ ಗೀವ್‌ ಆರ್ಡರ್‌’ ಆಗಿದೆ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಸಿರಿವಂತರು ಕಸಿದುಕೊಂಡಿರುವ ಬಡವರ ಭೂಮಿಯನ್ನು ಅವರಿಗೆ 15 ದಿನಗಳ ಒಳಗೆ ವಾಪಾಸ್‌ ನೀಡುತ್ತೇವೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next