Advertisement

ಇಸ್ತ್ರಿ ಪೆಟ್ಟಿಗೆಯಿಂದ ಪತ್ನಿಯ ಜನನಾಂಗ ಸುಡಲು ಯತ್ನ

11:40 AM Sep 27, 2017 | Team Udayavani |

ಬೆಂಗಳೂರು: ಪಾನಮತ್ತ ವ್ಯಕ್ತಿಯೊಬ್ಬ ಪತ್ನಿಯ ಜನನಾಂಗವನ್ನು ಇಸ್ತ್ರಿ ಪೆಟ್ಟಿಗೆಯಿಂದ ಸುಡಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ನೊಂದ ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಪೊಲೀಸರು, ಆರೋಪಿ ದಿಲೀಪ್‌ ಕುಮಾರ್‌ (28 ) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಬಾಣಸವಾಡಿಯ ಜಾನಕಿರಾಮ್‌ ಲೇಔಟ್‌ನ ನಿವಾಸಿಯಾಗಿರುವ ದಿಲೀಪ್‌ಕುಮಾರ್‌ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೇಮಾ (ಹೆಸರು ಬದಲಿಸಲಾಗಿದೆ) ಎಂಬುವವರನ್ನು ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದ ದಿಲೀಪ್‌, ಕಳೆದ ಎರಡು ವರ್ಷಗಳಿಂದ ವಿಪರೀತ ಮದ್ಯವ್ಯಸನಿಯಾಗಿದ್ಗದು ಪತ್ನಿಗೆ ವರದಕ್ಷಿಣಿ ತರುವಂತೆ ಪೀಡಿಸುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ಅದೇ ರೀತಿ ಸೆ.23ರಂದು ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ದಿಲೀಪ್‌ ಪತ್ನಿ ಜೊತೆ  ಜಗಳವಾಡಿದ್ದಾನೆ. ತಡರಾತ್ರಿಯವರೆಗೂ ದಂಪತಿ ನಡುವೆ ಜಗಳ ನಡೆದಿದ್ದು ಮಕ್ಕಳು ಮಲಗಿಕೊಂಡಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ಇಸ್ತ್ರೀಪೆಟ್ಟಿಗೆ ತೆಗೆದುಕೊಂಡು ಕಾಯಿಸಿದ್ದ ಆರೋಪಿ, ಪತ್ನಿಗೆ ಥಳಿಸಿ ಕೆಲ ಖಾಸಗಿ ಭಾಗಗಳಿಗೆ ಸುಡಲು ಯತ್ನಿಸಿದ್ದಾನೆ.  ಅರೆಬರೆ ಗಾಯಗಳಿಂದ ಕಿರುಚಿಕೊಂಡ ಪತ್ನಿಯು ಹೊರಗಡೆ ಓಡಿಬಂದಿದ್ದಾರೆ.  

ಕೂಡಲೇ ಅಕ್ಕ-ಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾರನೇ ದಿನ ಮಹಿಳೆ ನೀಡಿದ ದೂರಿನ ಅನ್ವಯ ಆರೋಪಿ ದಿಲೀಪ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next