Advertisement

ಸಂಚಾರಿ ವಿಜಯ್‌ ಹೀರೋ ಅಲ್ಲ!

10:50 AM Jul 10, 2017 | Team Udayavani |

ಹಿರಿಯ ನಿರ್ದೇಶಕ ಎಸ್‌. ಉಮೇಶ್‌ ನಿರ್ದೇಶನದ “ಹೊಸ ಅನುಭವ’ ಎಂಬ ಚಿತ್ರ ಈ ಶುಕ್ರವಾರ ಬಿಡುಗಡೆಯಾಗುವುದಕ್ಕೆ ಸಜಾಗಿದೆ. ಈ ಚಿತ್ರದ ಪೋಸ್ಟರ್‌ಗಳಲ್ಲಿ ಸಂಚಾರಿ ವಿಜಯ್‌ ಅವರನ್ನೂ ನೋಡಬಹುದು. ಬಹುಶಃ ಅವರೇ ಈ ಚಿತ್ರದ ಹೀರೋ ಇರಬಹುದು ಎಂದುಕೊಂಡರೆ, ಈ ಚಿತ್ರಕ್ಕೆ ವಿಜಯ್‌ ಹೀರೋ ಅಲ್ಲ ಎನ್ನುತ್ತಾರೆ ನಿರ್ದೇಶಕ ಉಮೇಶ್‌.

Advertisement

“ನಮ್ಮ ಚಿತ್ರಕ್ಕೆ ಸಂಚಾರಿ ವಿಜಯ್‌ ಹೀರೋ ಅಲ್ಲ. ಅವರು ಕ್ಲೈಮ್ಯಾಕ್ಸ್‌ಗೆ ಬರುತ್ತಾರೆ. ಕೊನೆಯ ಎರಡು ರೀಲುಗಳಲ್ಲಿ ಮಾತ್ರ ಇರುತ್ತಾರೆ. ಆ 20 ನಿಮಿಷಗಳನ್ನು ಬಿಟ್ಟರೆ, ಮಿಕ್ಕಂತೆ ಅವರು ಚಿತ್ರದಲ್ಲಿರುವುದಿಲ್ಲ’ ಎನ್ನುತ್ತಾರೆ ಉಮೇಶ್‌. ಹಾಗಾದರೆ, ಚಿತ್ರದ ಹೀರೋ ಯಾರು ಎಂದರೆ, ನಿರ್ಮಾಪಕ ರವಣಪ್ಪನವರತ್ತ ಅವರು ಕೈ ತೋರಿಸುತ್ತಾರೆ. ಇಲ್ಲಿ ರವಣಪ್ಪಒಂದು ದೊಡ್ಡ ಪಾತ್ರ ಮಾಡುವುದರ ಜೊತೆಗೆ, “ಬಕಾಸುರ ನಾನೇ ಬಕಾಸುರ …’ ಎಂಬ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಕಥೆ, ಸಾಹಿತ್ಯ ಎಲ್ಲವೂ ಅವರದ್ದೇ. ಇನ್ನು ಕಾಶೀನಾಥ್‌ ಅವರ ಅನುಭವಕ್ಕೂ, ಈ ಚಿತ್ರಕ್ಕೂ ಏನಾದರೂ ಸಂಬಂಧವಿದೆಯಾ ಎಂದರೆ, ಯಾವುದೇ ಸಂಬಂಧವಿಲ್ಲವಂತೆ. ಚಿತ್ರದಲ್ಲಿ ರವಣಪ್ಪಜೊತೆಗೆ, ಯಶಸ್ವಿನಿ ನಾಯಕಿಯಾಗಿ ನಟಿಸಿದ್ದು, ಪದ್ಮನಾಭನ್‌, ಎಸ್‌. ನಾರಾಯಣ್‌, ದಯಾಳ್‌ ಮುಂತಾದವರು ನಟಿಸಿದ್ದಾರೆ. ಎ.ಟಿ. ರವೀಶ್‌ ಸಂಗೀತ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next