Advertisement

ನಾಳೆ ಮಂಗಳೂರಿಗೆ ಅಮಿತ್ ಶಾ: ಏರ್ಪೋರ್ಟ್ ಗೆ ಸಂಚಾರ ಮಾರ್ಗಗಳ ಬದಲಾವಣೆ

10:06 PM Feb 10, 2023 | Team Udayavani |

ಮಂಗಳೂರು: ಫೆ. 11 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಗರಕ್ಕೆ ಆಗಮಿಸಿ ಏರ್ಪೋರ್ಟ್ ರಸ್ತೆಯಲ್ಲಿನ ಕೆಂಜಾರು ಸಮೀಪದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವ ಕಾರಣ ಸಂಜೆ ಸುಮಾರು 4 ಗಂಟೆಯಿಂದ 9 ಗಂಟೆಯವರೆಗೂ ಸಂಚಾರ ಮಾರ್ಗಗಳ ಬದಲಾವಣೆ ಮಾಡಲಾಗಿದೆ.

Advertisement

ಕೆಂಜಾರು ಸಮೀಪದ ಏರ್ಪೋರ್ಟ್ ರಸ್ತೆಯಲ್ಲಿ ವಾಹನ ಹಾಗೂ ಜನಸಂದಣಿ ಜಾಸ್ತಿ ಇರಬಹುದಾದ ಕಾರಣ, ಸಂಚಾರ ವ್ಯತ್ಯಯ ಆಗಬಹುದಾದ ಕಾರಣ ಕೆಂಜಾರು ಸಮೀಪದ ರಸ್ತೆಯನ್ನು ಉಪಯೋಗಿಸಿ ಏರ್ಪೋರ್ಟ್ ಗೆ ಹೋಗುವವರು ಪರ್ಯಾಯ ರಸ್ತೆಯಾಗಿ
1 ಮುಲ್ಕಿ – ಕಟೀಲ್ – ಬಜಪೆ ಮೂಲಕ ಏರ್ ಪೋರ್ಟ್
2 ಕುದುರೆಮುಖ ಜಂಕ್ಷನ್ – ಜೋ ಕಟ್ಟೆ – ಪೊರ್ಕೊಡಿ – ಏರ್ ಪೋರ್ಟ್
3 ಇಂಡಸ್ಟ್ರಿಯಲ್ ಏರಿಯಾ -ಜೋಕಟ್ಟೆ -ಪೊರ್ಕೋಡಿ -ಏರ್ಪೋರ್ಟ್
4 ನಂತೂರು – ಬಿಕರ್ನ ಕಟ್ಟೆ- ಕೈ ಕಂಬ -ಏರ್ಪೋರ್ಟ್.  ಈ ಮಾರ್ಗಗಳನ್ನು ಉಪಯೋಗಿಸಬೇಕಾಗಿ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next