Advertisement

ವಿಷ ಗಾಳಿ ಸೇವಿಸಿ ಯೋಧನ ಮಕ್ಕಳಿಬ್ಬರ ಸಾವು

11:16 PM Oct 30, 2019 | Lakshmi GovindaRaju |

ರಾಯಬಾಗ: ಕಾಳುಗಳಿಗೆ ಲೇಪನ ಮಾಡಿದ ರಾಸಾಯನಿಕದ ಗಾಳಿ ಸೇವಿಸಿ ಯೋಧನ ಮಕ್ಕಳಿಬ್ಬರು ಮೃತಪಟ್ಟಿದ್ದು, ಪತ್ನಿ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ. ಯೋಧ ಹನಮಂತ ಕುಂಬಾರ ಮತ್ತು ಕವಿತಾ ದಂಪತಿಯ ಮಕ್ಕಳಾದ ಜಯಶ್ರೀ (6) ಐಶ್ವರ್ಯ(4) ಮೃತಪಟ್ಟವರು. ಯೋಧನ ಸೋದರ ಆಹಾರಧಾನ್ಯ ವ್ಯಾಪಾರ ಮಾಡುತ್ತಿದ್ದರು. ಅದಕ್ಕಾಗಿ ಮನೆಯಲ್ಲೇ ಕಾಳುಕಡ್ಡಿ ಸಂಗ್ರಹಿಸಿಟ್ಟಿದ್ದರು.

Advertisement

ಅವು ಕೆಡದಂತೆ ರಾಸಾಯನಿಕ ಲೇಪನ ಮಾಡಲಾಗಿತ್ತು. ಅದೇ ಕೋಣೆಯಲ್ಲಿ ಮಲಗಿದ್ದ ಯೋಧನ ಪತ್ನಿ ಹಾಗೂ ಮಕ್ಕಳು ರಾತ್ರಿ ತೀವ್ರ ಅಸ್ವಸ್ಥಗೊಂಡರು. ಮಕ್ಕಳು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರೆ, ತಾಯಿ ಮೀರಜ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಯೋಧ ಹನುಮಂತ ಕಳೆದ ಹತ್ತು ವರ್ಷಗಳಿಂದ ಆಸ್ಸಾಂನ ಗುವಾಹಟಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next