Advertisement

ಜೂ. 30: “ಮಲಬಾರ್‌ ರಿವರ್‌ ಕ್ರೂಸ್‌’ಯೋಜನೆ ಉದ್ಘಾಟನೆ

06:35 AM Jun 21, 2018 | |

ಕಾಸರಗೋಡು: ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಏಳು ನದಿಗಳನ್ನು ಸಂಯೋಜಿಸಿಕೊಂಡು ನದಿಗಳ ಮತ್ತು ಹಿನ್ನೀರುಗಳ ಮೂಲಕ ವಿಹಾರ ನೌಕಾಯಾನ ಪ್ರವಾಸೋದ್ಯಮ (ರಿವರ್‌ ಕ್ರೂಸ್‌ ಟೂರಿಸಂ) ರೂಪಿಸಲಾಗಿದ್ದು, ಜೂ. 30 ರಂದು ಪರಶ್ಶಿನಕಡವಿನಲ್ಲಿ ಮುಖ್ಯಮಂತ್ರಿ ಉದ್ಘಾಟಿಸುವರು.

Advertisement

ಮಲಬಾರ್‌ ರಿವರ್‌ ಕ್ರೂಸ್‌ ಟೂರಿಸಂ ಯೋಜನೆಯು ಜಾರಿಯಾಗುವುದ ರೊಂದಿಗೆ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ಮತ್ತೂಂದು ಸಾಧನೆಯಾಗಲಿದೆ. ಜಿಲ್ಲೆಯ ಚಂದ್ರಗಿರಿ ನದಿಯಿಂದ ಆರಂಭಿಸಿ ಕವಾಯಿ ನದಿ ತನಕ ಕಾರ್ಯಗತಗೊಳಿಸುವ ನೂತನ ಯೋಜನೆಗಳು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಾಗಿವೆ.

ಎಲ್ಲೆಲ್ಲಿ ಏನೇನು?
ಜಿಲ್ಲೆಯಲ್ಲಿ  ಹರಿಯುವ ಚಂದ್ರಗಿರಿ ನದಿಯಲ್ಲಿ  ಯಕ್ಷಗಾನ ಕ್ರೂಸ್‌ನಿಂದ ಆರಂಭಿಸಿ ಪೆರುಂಬಾ ನದಿಯಲ್ಲಿ  ಮ್ಯೂಸಿಕ್‌ ಕ್ರೂಸ್‌, ಕವಾಯಿ ಹಾಗೂ ವಲಿಯಪರಂಬ ಹಿನ್ನೀರುಗಳಲ್ಲಿ  ಹ್ಯಾಂಡೂÉಮ್‌ ಆ್ಯಂಡ್‌ ಹ್ಯಾಂಡಿಕ್ರಾಫ್ಟ್‌  ಕ್ರೂಸ್‌, ತೇಜಸ್ವಿನಿ ನದಿ ಯಲ್ಲಿ  ವಾಟರ್‌ ನ್ಪೋರ್ಟ್ಸ್ ಆ್ಯಂಡ್‌ ರಿವರ್‌ ಬಾತಿಂಗ್‌ ಕ್ರೂಸ್‌, ವಲಯಪರಂಬ ಹಿನ್ನೀರಿನಲ್ಲಿ  ಮಾದರಿ ರೆಸ್ಪಾನ್ಸಿಬಲ್‌ ಗ್ರಾಮ ಎಂಬ ಯೋಜನೆಗಳನ್ನು  ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಉತ್ತರ ಕೇರಳ ಅಭಿವೃದ್ಧಿ ಗುರಿ
ಮಲಬಾರ್‌ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ  ಸಮಗ್ರ ಅಭಿವೃದ್ಧಿಯ ಉದ್ದೇಶ ದೊಂದಿಗೆ ಕೇರಳ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯು ಅನುಷ್ಠಾನಕ್ಕೆ ತರುವ ಮಲಬಾರ್‌ ರಿವರ್‌ ಕ್ರೂಸ್‌ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಯೋಜನೆಯು ಜಾರಿಯಾಗುವುದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ  ಉತ್ತರ ಕೇರಳ ಅಭಿವೃದ್ಧಿ ಹೊಂದಲಿದೆ.

ಮಲೆನಾಡು ಮಲಬಾರ್‌ ಕ್ರೂಸ್‌ ಪ್ರವಾಸೋದ್ಯಮ ಯೋಜನೆಯು ಪ್ರವಾಸೋದ್ಯಮ ವಲಯದಲ್ಲಿ  ವಿಭಿನ್ನವಾದ ಟೂರಿಸಂ ಬ್ರಾÂಂಡ್‌ ಆಗಲಿದೆ. ಪರಿಸರ ಸ್ನೇಹಿ ಪ್ರವಾಸೋದ್ಯಮ ಯೋಜನೆಯನ್ನು  ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಗ್ರೀನ್‌ ಆರ್ಕಿಟೆಕ್ಚ‌ರ್‌ ವಿನ್ಯಾಸ ಅನುಸಾರ ನಿರ್ಮಾಣ ಕಾಮಗಾರಿಗಳನ್ನು  ಯೋಜನೆಯಲ್ಲಿ ಒಳಪಡಿಸಲಾಗಿದೆ. ತ್ಯಾಜ್ಯ ನಿರ್ಮೂಲನಾ ವಿಧಾನಗಳನ್ನು  ಅವಲಂಬಿಸಿ ಮಾಲಿನ್ಯ ಮುಕ್ತ  ಪ್ರವಾಸೋದ್ಯಮ ಯೋಜನೆಯನ್ನು  ಕಾರ್ಯರೂಪಕ್ಕೆ ತರಲಾಗುವುದು.ಸ್ವೀವೇಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌, ಬಯೋ ಟಾಯ್ಲೆಟ್‌ಗಳು, ಪ್ಲಾಸ್ಟಿಕ್‌ ತ್ಯಾಜ್ಯ ಸಂಸ್ಕರಣೆ ಇತ್ಯಾದಿಗಳನ್ನು  ಖಾತರಿಪಡಿಸಿ ಯೋಜನೆಯನ್ನು  ಜಾರಿಗೊಳಿಸಲಾಗು ವುದು. ಉತ್ತರ ಕೇರಳದ ನದಿಗಳಲ್ಲಿ  ನೌಕಾ ವಿಹಾರದೊಂದಿಗೆ ಅದಕ್ಕೆ ಹೊಂದಿಕೊಂಡು ಆಯಾ ಪ್ರದೇಶಗಳ ಇತಿಹಾಸ, ಸಂಸ್ಕೃತಿ, ಕಲೆಗಳು,  ಸಂಗೀತ, ಆಚಾರ, ಅನುಷ್ಠಾನ ಗಳು, ಆರಾಧನಾ ಕೇಂದ್ರಗಳು, ಕರಕುಶಲ, ನೈಸರ್ಗಿಕ ಸೌಂದರ್ಯ, ಆಹಾರ ಮತ್ತು  ಮಲಬಾರ್‌ನ ಎಲ್ಲ ಪ್ರವಾಸಿ ಆಕರ್ಷಣೆ ಗಳನ್ನು  ಇದರಲ್ಲಿ ಒಳಪಡಿಸಿ ಮಲಬಾರ್‌ ಕ್ರೂಸ್‌ ಟೂರಿಸಂ ರಚಿಸಲಾಗಿದೆ.

Advertisement

ಕಣ್ಣೂರಿನಲ್ಲಿ ಅಂ.ರಾ. ವಿಮಾನ ನಿಲ್ದಾಣ
ಕಣ್ಣೂರಿನಲ್ಲಿ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರ ಕಾರ್ಯಾರಂಭ ಗೊಳ್ಳುವುದರೊಂದಿಗೆ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಮಾತ್ರವಲ್ಲದೆ ಈ ಯೋಜನೆಗಳ ಅನುಷ್ಠಾನದ ಮೂಲಕ ಮಲಬಾರಿನ ಅಸಂಖ್ಯಾತ ಮಂದಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವೂ ದೊರಕಲಿದೆ.

ಮಲಬಾರಿನ ಸಾಂಸ್ಕೃತಿಕ ಕಲಾರೂಪಕ 
ಪ್ರವಾಸೋದ್ಯಮದೊಂದಿಗೆ ಪರಂಪರಾಗತ ನೌಕರಿ ವಲಯಗಳಾದ ಮೀನುಗಾರಿಕೆ, ಭತ್ತ ಕೃಷಿ, ಕೈಮಗ್ಗ, ಕಂಚು – ಮಣ್ಣಿನ ಪಾತ್ರೆಗಳು ಮುಂತಾದವುಗಳನ್ನು  ಪ್ರವಾಸೋದ್ಯಮ ಯೋಜನೆಯ ಅಂಗವಾಗಿಸಿ ಅವುಗಳ ನಿರ್ಮಾಣ ಹಾಗೂ ಮಾರಾಟವನ್ನು  ಇದರ ಅಂಗವಾಗಿ ಅನುಷ್ಠಾನಕ್ಕೆ ತರಲಾಗುವುದು. ಅಡುಗೆ ವಿಧಾನಗಳು, ಮಲಬಾರಿನ ವಿಶೇಷ ಖಾದ್ಯಗಳು, ಸ್ಥಳೀಯ ಖಾದ್ಯಗಳನ್ನು  ಪ್ರವಾಸಿಗರಿಗೆ ಒದಗಿಸಲು ಮತ್ತು  ಪರಿಚಯಿಸಲು ತೀರ್ಮಾನಿಸಲಾಗಿದೆ. 

ಜಲ ಸಾರಿಗೆಯನ್ನು ಇದರ ಮೂಲಕ ಪ್ರಚಾರಕ್ಕೆ ತರಲು ಉದ್ದೇಶಿಸಲಾಗಿದೆ. ಮಲಬಾರಿನ ಸಾಂಸ್ಕೃತಿಕ ಕಲಾರೂಪಕಗಳಾದ ತೈಯ್ಯಂ, ಒಪ್ಪನ, ಕೋಲ್ಕಳಿ, ಪೂರಕಳಿ, ಯಕ್ಷಗಾನ ಮೊದಲಾದವುಗಳನ್ನು  ಯೋಜನೆಯಲ್ಲಿ ಸೇರಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರಕಾರವು 50 ಕೋಟಿ ರೂ. ಒದಗಿಸಿದೆ. 100 ಕೋಟಿ ರೂ.ಕೇಂದ್ರ ಸರಕಾರದಿಂದ ಧನಸಹಾಯವಾಗಿ ನಿರೀಕ್ಷಿಸಲಾಗಿದೆ.ಯೋಜನೆಯು ಪೂರ್ಣಗೊಳ್ಳಲು 325 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next