Advertisement

ವಿಮಾನದಲ್ಲಿ ದುರ್ವರ್ತನೆ ತೋರಿದ್ರೆ “ಹಾರಾಟ’ಕಟ್‌

03:45 AM Apr 09, 2017 | Team Udayavani |

ನವದೆಹಲಿ: ವಿಮಾನಗಳಲ್ಲಿ ದುರ್ವರ್ತನೆ ತೋರುವ ಪ್ರಯಾಣಿಕರಿಗೆ ತಕ್ಕ ಪಾಠ ಕಲಿಸಲು ಚಿಂತನೆ ನಡೆಸಿರುವ ಕೇಂದ್ರ ಸರ್ಕಾರ, “ಪುಂಡ ಪ್ರಯಾಣಿಕ’ರ ಹೆಸರನ್ನು “ರಾಷ್ಟ್ರೀಯ ನೋ ಫ್ಲೈ ಪಟ್ಟಿ’ಗೆ ಸೇರಿಸಲು ಮುಂದಾಗಿದೆ.

Advertisement

ಈ ಕುರಿತು ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್‌ ಸಿನ್ಹಾ ಅವರು ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್‌ ಮೇಲಿನ ನಿಷೇಧ ಹಿಂಪಡೆದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. “ವಿಮಾನಗಳಲ್ಲಿ ಅಶಿಸ್ತಿನ ವರ್ತನೆ ತೋರುವ ಮತ್ತು ಸಿಬ್ಬಂದಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವವರ ವಿರುದ್ಧ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ. ಜತೆಗೆ ಅಂಥವರನ್ನು “ಹಾರಾಟ ನಿಷೇಧ ಪಟ್ಟಿಗೆ’ಗೆ ಸೇರಿಸಲಾಗುತ್ತದೆ,’ ಎಂದು ಸಿನ್ಹಾ ಹೇಳಿದ್ದಾರೆ.

ನಿಷೇಧ ವಾಪಸ್‌: ಸಂಸದ ಗಾಯಕ್ವಾಡ್‌ ಮೇಲಿನ ನಿಷೇಧವನ್ನು ಏರ್‌ ಇಂಡಿಯಾ ಹಿಂಪಡೆದ ಬೆನ್ನಲ್ಲೇ, ಶನಿವಾರ ವಿಮಾನಯಾನ ಒಕ್ಕೂಟದ ನಾಲ್ಕು ಸದಸ್ಯ ಸಂಸ್ಥೆಗಳಾದ ಜೆಟ್‌ ಏರ್‌ವೆàಸ್‌, ಸ್ಪೈಸ್‌ಜೆಟ್‌, ಗೋ ಏರ್‌ ಮತ್ತು ಇಂಡಿಗೋ ಸಂಸ್ಥೆಗಳೂ ವಾಪಸ್‌ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next