Advertisement

Tumakuru: ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡಿಲ್ಲ: ಕೇಂದ್ರ ಸಚಿವ ಸೋಮಣ್ಣ

12:21 AM Aug 26, 2024 | Team Udayavani |

ತುಮಕೂರು: ಕೇಂದ್ರ ಸರಕಾರ ಯಾವುದೇ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ, ನಮ್ಮ ರಾಜ್ಯಕ್ಕೂ ತಾರತಮ್ಯ ಮಾಡಿಲ್ಲ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

Advertisement

ನಗರದಲ್ಲಿ ರವಿವಾರ ಪತ್ರಕರ್ತರ ಜತೆ ಮಾತನಾಡಿ, ಆರೋಪ ಮಾಡುವವರ ಬಾಯಿ ಹೊಲಿಯಲು ಆಗಲ್ಲ. ಹಿಡಿದು ಹಾಕಲು ಆಗಲ್ಲ, ಕಟ್ಟಿ ಹಾಕಲೂ ಆಗಲ್ಲ ಎಂದರು. ನಾವ್ಯಾರೂ ಆತ್ಮ ವಂಚನೆಗೆ ಒಳಗಾಗಬಾರದು, ರಾಜ್ಯದ ಕಾಮಗಾರಿಗೆ ಕೇಂದ್ರ ಸರಕಾರ ಶೇ. 50-60 ನೆರವು ನೀಡುವುದರ ಜತೆಗೆ ವಿಶೇಷ ಕಾರ್ಯಕ್ರಮ ನೀಡಿದೆ. ರಾಜ್ಯವನ್ನು ಸರ್ವಾಂಗೀಣ ರೀತಿಯಲ್ಲಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಾಸ್ತವಾಂಶ ತೆಗೆದುಕೊಂಡು ಚರ್ಚೆ ಮಾಡುವುದಾದರೆ ಸಿದ್ದನಿದ್ದೇನೆ. ಪ್ರಧಾನಿ ಮಲತಾಯಿ ಧೋರಣೆಯನ್ನು ರಾಷ್ಟ್ರದ ಯಾವುದೇ ರಾಜ್ಯಗಳಿಗೂ ಮಾಡಿಲ್ಲ, ಕರ್ನಾಟಕಕ್ಕೆ ಐದು ಮಂತ್ರಿಗಳನ್ನು ಕೊಟ್ಟಿದ್ದಾರೆ, ಅತ್ಯುತ್ತಮ ಇಲಾಖೆ ನೀಡಿದ್ದಾರೆ. ಕೇಂದ್ರ-ರಾಜ್ಯ ಸರಕಾರ ಒಂದೇ ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡುವಂತೆ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next