Advertisement

ಸಮಯ ಬರಲಿ: ಕೊನೆಗೂ ಫೇಸ್ ಬುಕ್‍ನಲ್ಲೇ ಮೌನ ಮುರಿದ ರಕ್ಷಿತ್ ಶೆಟ್ಟಿ!

06:30 PM Sep 11, 2018 | |

ರಶ್ಮಿಕಾ ಮಂದಣ್ಣ ಹಾಗೂ ತಮ್ಮ ಎಂಗೇಜ್​ಮೆಂಟ್​ ಬ್ರೇಕಪ್ ವಿಚಾರದ ಬಗ್ಗೆ ಸಂಬಂಧಿಸಿದಂತೆ ಕೊನೆಗೂ ರಕ್ಷಿತ್ ಶೆಟ್ಟಿ ಮೌನ ಮುರಿದಿದ್ದಾರೆ. ಎಲ್ಲರೂ ಆಕೆಯನ್ನು ದೂಷಿಸುವುದನ್ನು ನಾನು ಗಮನಿಸಿದ್ದೇನೆ, ದಯವಿಟ್ಟು ಆಕೆಗೆ ಶಾಂತಿಯಿಂದ ಇರಲು ಬಿಡಿ ಎಂದು ರಕ್ಷಿತ್ ಹೇಳಿದ್ದಾರೆ.

Advertisement

ಅಲ್ಲದೇ, ಫೇಸ್​​ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಿಂದ ಬಹಳ ದೂರ ಸರಿದಿದ್ದ ರಕ್ಷಿತ್ ಶೆಟ್ಟಿ, ಈಗ ಮತ್ತೆ ತಮ್ಮ ಫೇಸ್​ಬುಕ್ ಪೇಜ್​ ಮೂಲಕವೇ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸದ್ಯ ಹರಿದಾಡುತ್ತಿರುವ ಯಾವುದೇ ಸುದ್ದಿಗಳನ್ನು ನಂಬಬೇಡಿ. ಈ ಕುರಿತು ಸದ್ಯದಲ್ಲೇ ನಾನು ನಿಮಗೇ ಸ್ಪಷ್ಟನೆ ಕೊಡುತ್ತೇನೆ.

ರಶ್ಮಿಕಾ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಮೆಂಟ್​ಗಳು ಬರುತ್ತಿವೆ. ದಯವಿಟ್ಟು ಅವುಗಳನ್ನು ನಿಲ್ಲಿಸಿ ಎಂದಿದ್ದಾರೆ. ಅಲ್ಲದೇ ಎರಡು ವರ್ಷಗಳಿಂದ ರಶ್ಮಿಕಾ ಅವರನ್ನು ನೋಡುತ್ತಿದ್ದೇನೆ. ನಿಮಗಿಂತ ಹೆಚ್ಚು ಅವರ ಬಗ್ಗೆ ನನಗೆ ಗೊತ್ತು. ದಯವಿಟ್ಟು ಸುಳ್ಳು ಸುದ್ದಿಗಳನ್ನ ಹಬ್ಬಿಸೋದು ಬೇಡ. ಸಮಯ ಬಂದಾಗ ಈ ಕುರಿತು ಎಲ್ಲವೂ ನಿಮಗೆ ಗೊತ್ತಾಗುತ್ತೆ ಎಂದು ರಕ್ಷಿತ್​ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next