Advertisement

ರಾತ್ರೋರಾತ್ರಿ ಬಸ್ ನಿಲ್ದಾಣವನ್ನೇ ಕದ್ದೊಯ್ದ ಕಳ್ಳರು!

12:06 PM Aug 29, 2021 | Team Udayavani |

ಕೆ.ಆರ್‌.ಪುರ: ಸಾರ್ವಜನಿಕ ಬಸ್‌ ನಿಲ್ದಾಣ ರಾತ್ರೋರಾತ್ರಿ ಮಾಯವಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಆನಂದಪುರದಲ್ಲಿ ನಡೆದಿದೆ.

Advertisement

ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿರುವ ಆನಂದಪುರದಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಕಬ್ಬಿಣದಿಂದ ನಿರ್ಮಿಸಿದ ಬಸ್‌ ನಿಲ್ದಾಣವನ್ನು ಶುಕ್ರವಾರ ರಾತ್ರಿ ಕಿಡಿಗೇಡಿಗಳು ವೆಲ್ಡಿಂಗ್‌ ಕಟರ್‌ ಮೂಲಕ ಕಟ್‌ ಮಾಡಿ ಕದ್ದೊಯ್ದಿದ್ದಾರೆ.

ಬಸ್‌ ನಿಲ್ದಾಣ ನಿರ್ಮಾಣದ ಬಳಿಕ ಇದರ ಹಿಂದೆ ಇದ್ದ ನಿವೇಶನದಲ್ಲಿ ಆರ್‌ ಎನ್‌ಎಸ್‌ ಕಾಂಪ್ಲೆಕ್ಸ್‌ ಕಟ್ಟಡ ನಿರ್ಮಾಣ ಮಾಡಿದ್ದು, ಕಟ್ಟಡದಲ್ಲಿ ರೂಟ್‌ ಅಂಡ್‌ ಶೂಟ್ಸ್‌ ಫ್ರೂಟ್ಸ್‌ ಮಳಿಗೆ ಹಾಗೂ ಮಂಜುನಾಥ ನೇತ್ರಾಲಯ ಆಸ್ಪತ್ರೆಗೆ ಬಾಡಿಗೆ ನೀಡಲಾಗಿತ್ತು.

ಇದನ್ನೂ ಓದಿ:ಟ್ಯಾಟೂ ನೀಡಿದ ಸಾಕ್ಷಿ: ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ ಟ್ಯಾಟೂ

ಆನಂದಪುರ ಮುಖ್ಯರಸ್ತೆಯಲ್ಲಿನ ಈ ಕಾಂಪ್ಲೆಕ್ಸ್‌ಗೆ ಬಸ್‌ ನಿಲ್ದಾಣ ಅಡ್ಡಲಾಗಿತ್ತು. ಇದರಿಂದ ಬ್ಯುಸಿನೆಸ್‌ ಸಹ ಕಡಿಮೆ ಆಗಿತ್ತು. ಈ ಬಸ್‌ ನಿಲ್ದಾಣವನ್ನು ಹೇಗಾದರೂ ತೆರವು ಮಾಡಬೇಕೆಂದು ಹಲವು ವರ್ಷಗಳಿಂದ ಕಾಯುತ್ತಿದ್ದು ನಿನ್ನೆ ರಾತ್ರಿ ವೆಲ್ಡಿಂಗ್‌ ಕಟರ್‌ ಮೂಲಕ ರಾತ್ರೋ ರಾತ್ರಿ ಮಾಯ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿ ಲಕ್ಷ್ಮಣ್‌ ಆರೋಪಿಸಿದರು.

Advertisement

ಸಿ.ಸಿ. ಕ್ಯಾಮೆರಾ ವಶ: ಬಸ್‌ ನಿಲ್ದಾಣ ಮಾಯವಾಗಿರುವ ಕುರಿತು ಮಾಹಿತಿ ತಿಳಿದು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆ.ಆರ್‌.ಪುರ ಪೊಲೀಸ್‌ ಠಾಣೆಗೆ ದೂರು ನೀಡಿದರು.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಈ ಕಾಂಪ್ಲೆಕ್ಸ್‌ನಲ್ಲಿದ್ದ ಸಿ.ಸಿ.ಕ್ಯಾಮೆರಾದ ಡಿವಿಆರ್‌ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ರಾತ್ರೋರಾತ್ರಿ ಕದ್ದೊಯ್ಯೊದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next