Advertisement

“OTT ವೇದಿಕೆಯಲ್ಲಿ ಅವಮಾನ ಸಲ್ಲದು”: ಅನುರಾಗ್‌ ಠಾಕೂರ್‌

10:43 PM Jul 18, 2023 | Team Udayavani |

ನವದೆಹಲಿ: ಒಟಿಟಿ ವೇದಿಕೆಗಳಲ್ಲಿ ಸೃಜನಶೀಲ ಸ್ವಾತಂತ್ರ್ಯದ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಮಾಜವನ್ನು ಅವಮಾನಿಸಲು ಸರ್ಕಾರವು ಅನುಮತಿಸುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಹೇಳಿದರು.

Advertisement

ಒಟಿಟಿ ನಿರ್ಮಾಣಕಾರರು, ಪ್ರತಿನಿಧಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆಟ್ಟದಾಗಿ ಪ್ರಚಾರ ಮಾಡಲು ಮತ್ತು ಸೈದ್ಧಾಂತಿಕ ಪಕ್ಷಪಾತ ಮಾಡಲು ಒಟಿಟಿ ವೇದಿಕೆಯನ್ನು ಸಾಧನವಾಗಿ ಬಳಸದಂತೆ ಇದೇ ವೇಳೆ ಎಚ್ಚರಿಕೆ ನೀಡಿದರು. “ಭಾರತೀಯ ಸಂಸ್ಕೃತಿ ಮತ್ತು ಸಮಾಜವನ್ನು ತುತ್ಛವಾಗಿ ಚಿತ್ರಿಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ,” ಎಂದು ಅನುರಾಗ್‌ ಠಾಕೂರ್‌ ಖಡಕ್ಕಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next