Advertisement

ಶ್ರೀರಂಗಪಟ್ಟಣ: ಹೆದ್ದಾರಿ ಬದಿಯ ಅಂಗಡಿಗಳಲ್ಲಿ ಸರಣಿ ಕಳ್ಳತನ

12:14 PM Sep 28, 2021 | Team Udayavani |

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಬಳಿಯ ಮೈ- ಬೆಂ ಹೆದ್ದಾರಿ ಬದಿಯಲ್ಲಿರುವ ಅಂಗಡಿ ಗಳ ಬೀಗ ಮುರಿದು ದುಷ್ಕರ್ಮಿಗಳು ತಡರಾತ್ರಿ ಸರಣಿ‌ ಕಳ್ಳತನ‌ ನಡೆದಿದೆ.

Advertisement

ಶ್ರೀರಂಗಪಟ್ಟಣದ KSRTC ಬಸ್ ನಿಲ್ದಾಣದ ಸಮೀವಿರುವ ನಾಲ್ಕೈದು ಅಂಗಡಿಗಳ ಬೀಗ ಮುರಿದು ಅಂಗಡಿಯಲ್ಲಿದ್ದ ಪದಾರ್ಥಗಳು ಸೇರಿದಂತೆ ನಗದನ್ನು ಕಳ್ಳತನ‌ ಮಾಡಿದ್ದು ಮೈ- ಬೆಂ ಹೆದ್ದಾರಿ ಸಮೀಪವೇ ಇಂತಹ ಕೃತ್ಯ ನಡೆದಿರೋದು ಇದೀಗ ಪಟ್ಟಣದಲ್ಲಿ ಆತಂಕ ಮೂಡಿಸಿದೆ‌.

ಈ ಸಂಬಂಧ ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ  ಪತ್ತೆಗಾಗಿ ಅಕ್ಕಪಕ್ಕದ ಅಂಗಡಿಯ ಸಿಸಿಟಿವಿ ಹಾರ್ಡ್ ಡಿಸ್ಕ್ ಯನ್ನು ವಶಕ್ಕೆ ಪಡೆದಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next