Advertisement

Jalabala Vaidya: ಖ್ಯಾತ ರಂಗಕರ್ಮಿ, ಅಕ್ಷರ ಥಿಯೇಟರ್‌ನ ಸಹ ಸಂಸ್ಥಾಪಕಿ ಜಲಬಾಲ ನಿಧನ

09:12 PM Apr 09, 2023 | Team Udayavani |

ನವದೆಹಲಿ: ರಾಷ್ಟ್ರರಾಜಧಾನಿಯ ಖ್ಯಾತ ರಂಗಶಾಲೆ ಅಕ್ಷರ ಥಿಯೇಟರ್‌ನ ಸಹ ಸಂಸ್ಥಾಪಕಿ, ದಿಗ್ಗಜ ರಂಗಕರ್ಮಿ ಜಲಬಾಲಾ (86) ಅವರು ಅನಾರೋಗ್ಯದಿಂದಾಗಿ ಭಾನುವಾರ ದೆಹಲಿಯಲ್ಲಿ ಮೃತರಾಗಿದ್ದಾರೆ.

Advertisement

ಪತ್ರಕರ್ತೆ,ರಂಗಕರ್ಮಿಯಾಗಿ ಪ್ರಖ್ಯಾತರಾಗಿದ್ದ ಜಲಬಾಲಾ, ಸಂಗೀತ ನಾಟಕ ಅಕಾಡೆಮಿಯ ಟ್ಯಾಗೂರ್‌ ಪ್ರಶಸ್ತಿ, ದೆಹಲಿ ನಾಟ್ಯ ಸಂಘ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

“ದಿ ರಾಮಾಯಣ’ ಎನ್ನುವ ನಾಟಕದಲ್ಲಿ 25 ಪಾತ್ರಗಳನ್ನೂ ಒಬ್ಬರೇ ಅಭಿನಯಿಸುವ ಮೂಲಕ ಪ್ರಪಂಚದಾದ್ಯಂತ ಕೀರ್ತಿ ಪಡೆದಿದ್ದರು. ಜಲಬಾಲ ಅವರಿಗೆ ಇತ್ತೀಚಿನ ದಿನಗಳಲ್ಲಿ ಉಸಿರಾಟ ಸಮಸ್ಯೆ ಎದುರಾಗಿತ್ತು. ಭಾನುವಾರ ಅದೇ ಕಾರಣದಿಂದ ಮೃತಪಟ್ಟಿದ್ದಾರೆಂದು ಅವರ ಪುತ್ರಿ ಅನಸೂಯ ವೈದ್ಯಾ ತಿಳಿಸಿದ್ದಾರೆ.

ಇದನ್ನೂ ಓದಿ: 

Advertisement

Udayavani is now on Telegram. Click here to join our channel and stay updated with the latest news.

Next