Advertisement

ಅಧಿಕಾರಿಗಳ ಸೇವೆ ಶ್ಲಾಘನೀಯ

05:39 PM May 08, 2020 | Suhan S |

ಗೌರಿಬಿದನೂರು: ಕೋವಿಡ್ 19 ಸೋಂಕು ವಿಚಾರದಲ್ಲಿ ರೆಡ್‌ಝೋನ್‌ ಆಗಿದ್ದ ತಾಲೂಕನ್ನು ನಿಯಂತ್ರಣಕ್ಕೆ ತರುವಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೆ ಆರೋಗ್ಯ ಇಲಾಖೆಯ ಪರಿಶ್ರಮ ಶ್ಲಾಘನೀಯವಾದದ್ದು ಎಂದು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

Advertisement

ನಗರದ ತಾಪಂ ಆವರಣದಲ್ಲಿ ವಿಧು ರಾಶ್ವತ್ಥ  ಆರ್ಯವೈಶ್ಯ ಸಂತರ್ಪಣಾ ಸೇವಾ ಟ್ರಸ್ಟ್‌ ಮತ್ತು ವಾಸವಿ ಜೀವನ ಸಂಧ್ಯಾ ಟ್ರಸ್ಟ್‌, ವಿಧುರಾಶ್ವತ್ಥ ಇವರ ಆಶ್ರಯದಲ್ಲಿ ಕೋವಿಡ್‌-19 ಕಾರ್ಯಕರ್ತರಿಗೆ ದಿನಸಿ ಪದಾರ್ಥ ವಿತರಿಸಿ ಮಾತನಾಡಿದರು.

ಕಾರ್ಖಾನೆಗಳಲ್ಲಿ ತುರ್ತು ಸಭೆ: ಸರ್ಕಾರದ ಆದೇಶದಲ್ಲಿ ಕಾರ್ಖಾನೆ ಗಳನ್ನು ಪ್ರಾರಂಭಿಸಲು ಸೂಚಿಸಿರುವ ಹಿನ್ನೆಲೆ ಯಲ್ಲಿ ಕೋವಿಡ್ 19  ನಿಯಂತ್ರಣ ವಿಶೇಷ ಅಧಿಕಾರಿ ವರಪ್ರಸಾದ್‌ ರೆಡ್ಡಿ, ತಹಶೀ ಲ್ದಾರ್‌ ರಾಜಣ್ಣ,ಪೊಲೀಸ್‌ ವೃತ್ತ ನಿರೀಕ್ಷಕ ರವಿ ನೇತೃತ್ವದಲ್ಲಿ ಕುಡುಮಲ ಕುಂಟೆ ಕಾರ್ಖಾನೆಯ ವ್ಯವಸ್ಥಪಾಕ ರೊಂದಿಗೆ ಸಭೆ ನಡೆಸಿ ಮುನ್ನೆಚ್ಚ ರಿಕಾ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಆಂಧ್ರದ ಕಾರ್ಮಿಕರನ್ನು ಕರ್ತವ್ಯಕ್ಕೆ ಕರೆಸಿಕೊಳ್ಳ ಬಾರದು ಎಂದು ಸೂಚಿಸಲಾಗಿದೆ ಎಂದರು.

ತಾಲೂಕು ಆರೋಗ್ಯ ಆಡ ಳಿ ತಾಧಿಕಾರಿ ಡಾ.ಒ.ರತ್ನಮ್ಮ, ತಾಪಂ ಇಒ ಮುನಿ ರಾಜು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೇಶವ ರೆಡ್ಡಿ, ತಾಪಂ ಅಧ್ಯಕ್ಷ ಲೋಕೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next